ಭಯಪಡುವ ಅಗತ್ಯವಿಲ್ಲ, ತಾಳ್ಮೆಯಿಂದಿರಿ: ಯೆಸ್ ಬ್ಯಾಂಕಿನ ಬೆಳವಣಿಗೆ ಕುರಿತು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್

 ಯೆಸ್​ ಬ್ಯಾಂಕ್ ಬೆಳವಣಿಗೆಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.. "ಭಯಭೀತರಾಗಲು ಏನಿದೆ, ಭಯಪಡುವ ಅಗತ್ಯವಿಲ್ಲ, ಎಲ್ಲಾ ಠೇವಣಿದಾರರು ಸುರಕ್ಷಿತರಾಗಿದ್ದಾರೆ ಆರ್ಬಿಐ ಗವರ್ನರ್ ಸಹ ಇದನ್ನೇ ಹೇಳಿದ್ದಾರೆ.ತಾಳ್ಮೆಯಿಂದಿರಿ, ಎಲ್ಲವೂ ಚೆನ್ನಾಗಿರುತ್ತದೆ" ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ರಜನೀಶ್ ಕುಮಾರ್
ರಜನೀಶ್ ಕುಮಾರ್
Updated on

ನವದೆಹಲಿ: ಯೆಸ್​ ಬ್ಯಾಂಕ್ ಬೆಳವಣಿಗೆಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.. "ಭಯಭೀತರಾಗಲು ಏನಿದೆ, ಭಯಪಡುವ ಅಗತ್ಯವಿಲ್ಲ, ಎಲ್ಲಾ ಠೇವಣಿದಾರರು ಸುರಕ್ಷಿತರಾಗಿದ್ದಾರೆ ಆರ್ಬಿಐ ಗವರ್ನರ್ ಸಹ ಇದನ್ನೇ ಹೇಳಿದ್ದಾರೆ.ತಾಳ್ಮೆಯಿಂದಿರಿ, ಎಲ್ಲವೂ ಚೆನ್ನಾಗಿರುತ್ತದೆ" ಎಂದು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಯೆಸ್​ ಬ್ಯಾಂಕ್ ಷೇರುಗಳು  21.70 ರೂ.ಗಳಿಂದ (ಶೇ 58.97) 15.10 ರೂ.ಗೆ ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ತಡರಾತ್ರಿ ವಿನಿಮಯ ಕೇಂದ್ರಗಳಿಗೆ ನೀಡಿದ ಮಾಹಿತಿಯಲ್ಲಿ, ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಅವಕಾಶವನ್ನು ಅನ್ವೇಷಿಸಲು ತನ್ನ ಆಡಳಿತ ಮಂಡಲಿ ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಎಫ್‌ಒ ಪ್ರಶಾಂತ್ ಕುಮಾರ್ ಅವರನ್ನು ಯೆಸ್ ಬ್ಯಾಂಕಿನ  ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಖಾಸಗಿ ವಲಯದ ಬ್ಯಾಂಕಿನ ಆಡಳಿತ ಮಂಡಳಿಯನ್ನು ಗುರುವಾರ ನಿಷೇಧ ಮಾಡಿದ್ದ  ಆರ್‌ಬಿಐ ಠೇವಣಿ ಹಿಂಪಡೆಯುವಿಕೆಯನ್ನು ಒಂದು ಖಾತೆಗೆ ಒಂದು ತಿಂಗಳವರೆಗೆ 50,000 ರೂ.  ಎಂದು ಮಿತಿ ಹೇರಿತ್ತು.

ಈ ಹಿಂದೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಕೇಂದ್ರ ಬ್ಯಾಂಕ್ 30 ದಿನಗಳಲ್ಲಿ ಯೆಸ್ ಬ್ಯಾಂಕ್ ಅನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಶೀಘ್ರದಲ್ಲಿ ತರಲಿದೆ ಎಂದು ಹೇಳಿದ್ದರು."ವೈಯಕ್ತಿಕ ಅಸ್ತಿತ್ವದ ಸಮಸ್ಯೆ ಮಿತಿಯಲ್ಲಿ ಮಾತ್ರವಲ್ಲದೆ ಭಾರತೀಯ ಹಣಕಾಸು ಮತ್ತು ಬ್ಯಾಂಕ್ ವಲಯಗಳ ಸ್ಥಿರತೆ ಮತ್ತು ಸ್ಥಾಪಕತ್ವವನ್ನು ನಿರ್ವಹಿಸಲು ದೊಡ್ಡ ಮಟ್ಟದಲ್ಲಿ ಯಸ್ ಬ್ಯಾಂಕ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಂದು ನಮ್ಮ ಬ್ಯಾಂಕಿಂಗ್ ವಲಯ ಅಪಾಯದಲ್ಲಿದೆ ಎಂದು ಭಾವಿಸಬೇಕಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ವ್ಯವಹಾರ ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಸವಾಲುಗಳನ್ನು ಆರ್ ಬಿಐ ಸಮರ್ಥವಾಗಿ ಎದುರಿಸಲಿದೆ" ಅವರು ಹೇಳಿದ್ದಾರೆ.

ಯೆಸ್ ಬ್ಯಾಂಕ್ ಕುರಿತು ಆರ್‌ಬಿಐ ನಿರ್ಧಾರವು ಹಣಕಾಸು ಕ್ಷೇತ್ರದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. 30 ದಿನಗಳಲ್ಲಿ ಯೆಸ್ ಬ್ಯಾಂಕ್ ಪುನರುಜ್ಜೀವನಕ್ಕೆ ನಿರ್ಣಯವನ್ನು ಶೀಘ್ರವಾಗಿ ಮಾಡಲಾಗುವುದು ಎಂದು ಅವರು ಹೇಳಿದರು. ಗುರುವಾರ, ಆರ್‌ಬಿಐ ಯೆಸ್ ಬ್ಯಾಂಕ್ ಮಂಡಳಿಯನ್ನು 30 ದಿನಗಳ ಕಾಲ ರದ್ದುಗೊಳಿಸಿ ನಿರ್ವಾಹಕರನ್ನು ನೇಮಿತ್ತು. ಅಲ್ಲದೆ ಈ ಒಂದು ತಿಂಗಳ ಅವಧಿಯಲ್ಲಿ ಬ್ಯಾಂಕಿನ ಖಾತೆದಾರರು ಮಾಸಿಕ 50,000 ರೂ.ಮಾತ್ರ ವಿತ್ ಡ್ರಾ ಮಾಡುವಂತೆ ನಿಯಮ ಹೇರಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com