ಬಜರಂಗಿ ಭಾಯಿಜಾನ್ ಲಾಭದ ದುಡ್ಡು ರೈತರಿಗೆ

ಬಜರಂಗಿ ಭಾಯಿಜಾನ್ ಸಿನಿಮಾಕ್ಕೆ ಲಭಿಸಿದ ಲಾಭದ ದುಡ್ಡನ್ನು ರೈತರಿಗೆ ನೀಡಲು ಚಿತ್ರದ ನಿರ್ಮಾಪಕರು ತೀರ್ಮಾನಿಸಿದ್ದಾರೆ...
ಬಜರಂಗಿ ಭಾಯಿಜಾನ್
ಬಜರಂಗಿ ಭಾಯಿಜಾನ್
Updated on

ಮುಂಬೈ: ಬಜರಂಗಿ ಭಾಯಿಜಾನ್ ಸಿನಿಮಾಕ್ಕೆ ಲಭಿಸಿದ ಲಾಭದ ದುಡ್ಡನ್ನು ರೈತರಿಗೆ ನೀಡಲು ಚಿತ್ರದ ನಿರ್ಮಾಪಕರು ತೀರ್ಮಾನಿಸಿದ್ದಾರೆ.

ಸಿನಿಮಾದ ನಿರ್ದೇಶಕ ಕಬೀರ್ ಖಾನ್, ಸಲ್ಮಾನ್ ಖಾನ್‌ರ ಸಹೋದರಿ ಅಲ್ವಿರಾ ಖಾನ್- ಅಗ್ನಿಹೋತ್ರಿ ಮತ್ತು ಬಿಜೆಪಿ ನಾಯಕ ಶೈನಾ ಎನ್‌ಸಿ ಅವರು ಮಂಗಳವಾರ ಮಹರಾಷ್ಟ್ರದ ಕಂದಾಯ ಸಚಿವ ಏಕ್‌ನಾಥ್ ಖಾಡ್ಸೆ ಅವರನ್ನು ಭೇಟಿ ಮಾಡಿ ಬಜರಂಗಿ ಸಿನಿಮಾ ನೋಡುವಂತೆ ಆಮಂತ್ರಿಸಿದ್ದಾರೆ.

ಕೋಮು ಗಲಭೆಗಳನ್ನು ನಿಲ್ಲಿಸಬೇಕು ಎಂಬ ಸಂದೇಶ ಸಾರುವ ಸಿನಿಮಾ ಬಜರಂಗಿ ಭಾಯಿಜಾನ್. ಪ್ರಸ್ತುತ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಮುರಿದು ಮುನ್ನುಗ್ಗುತ್ತಿದ್ದು , ಸಿನಿಮಾಕ್ಕೆ ಲಭಿಸಿದ ಲಾಭದ ದುಡ್ಡನ್ನು ರೈತರಿಗೆ ನೀಡಲಾಗುವುದು ಎಂದು ಖಾಡ್ಸೆ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಶೈನಾ ಅವರು ಹೇಳಿದ್ದಾರೆ.

ಇತ್ತ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ರಾಜ್ಯದಲ್ಲಿ  ಬಜರಂಗಿ ಭಾಯಿಜಾನ್ ಸಿನಿಮಾಗೆ ತೆರಿಗೆ ರಹಿತ ಪ್ರದರ್ಶನ ನೀಡಲು ಸಮ್ಮತಿ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com