ಪ್ರತಿ ಗಾಂಧಿ ಜಯಂತಿಗೂ ಸಿನೆಮಾ ಬಿಡುಗಡೆ ಮಾಡಲಿರುವ ವಿಶಾಲ್ ಭಾರದ್ವಾಜ್

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಹೈದರ್' ಕಳೆದ ವರ್ಷ ಅಕ್ಟೋಬರ್ ೨ಕ್ಕೆ ಬಿಡುಗಡೆಯಾಗಿತ್ತು ಹಾಗೂ ಈ ವರ್ಷ ಅವರ ಸಹ ನಿರ್ಮಾಣದ 'ತಲ್ವಾರ್' ಬಿಡುಗಡೆಗೆ
ನಿರ್ದೇಶಕ ವಿಶಾಲ್ ಭಾರದ್ವಾಜ್
ನಿರ್ದೇಶಕ ವಿಶಾಲ್ ಭಾರದ್ವಾಜ್

ಮುಂಬೈ: ವಿಶಾಲ್ ಭಾರದ್ವಾಜ್ ನಿರ್ದೇಶನದ 'ಹೈದರ್' ಕಳೆದ ವರ್ಷ ಅಕ್ಟೋಬರ್ ೨ಕ್ಕೆ ಬಿಡುಗಡೆಯಾಗಿತ್ತು ಹಾಗೂ ಈ ವರ್ಷ ಅವರ ಸಹ ನಿರ್ಮಾಣದ 'ತಲ್ವಾರ್' ಬಿಡುಗಡೆಗೆ ಸಿದ್ಧವಾಗಿದೆ. ಅವರೇ ಚಿತ್ರಕಥೆ ಬರೆದು ನಿರ್ಮಿಸಿರುವ ಈ ಚಲನಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಹೀಗೆ ಪ್ರತಿ ಗಾಂಧಿ ಜಯಂತಿಗೆ ಬಿಡುಗಡೆ ಮಾಡುವ ಸಂಪ್ರದಾಯವನ್ನು ನಿರ್ದೇಶಕ ಬೆಳೆಸಿಕೊಂಡಿದ್ದಾರಂತೆ.

"ಬಿಡುಗಡೆ ದಿನಾಂಕದ ಬಗ್ಗೆ ವಿಶಾಲ್ ಸರ್ ಬಹಳ ಸಂತಸದಿಂದಿದ್ದಾರೆ. ಕಳೆದ ವರ್ಷ 'ಹೈದರ್' ಆಶ್ಚರ್ಯಕರವಾಗಿ ಬಿಡುಗಡೆಯಾಗಿತ್ತು... ಈ ವರ್ಷ 'ತಲ್ವಾರ್'.  ಟೊರೆಂಟೊ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಸಿನೆಮಾ ಈಗಾಗಲೇ ಸದ್ದು ಮಾಡಿದೆ. ಇನ್ನು ಮುಂದೆ ಪ್ರತಿ ಅಕ್ಟೋಬರ್ ೨ ಕ್ಕೆ ಸಿನೆಮಾ ಮಾಡಲು ಉತ್ಸುಕರಾಗಿದ್ದಾರೆ" ಎಂದು ವಕ್ತಾರ ತಿಳಿಸಿದ್ದಾರೆ.

ಹೈದರ್ ಸಿನೆಮಾದಲ್ಲಿ ಶಾಹಿದ್ ಕಪೂರ್, ಕೆ ಕೆ ಮೆನನ್, ಶ್ರದ್ಧಾ ಕಪೂರ್ ಮತ್ತು ಟಬು ನಟಿಸಿದ್ದರೆ ಮೇಘನಾ ಗುಲ್ಜಾರ್ ನಿರ್ದೇಶಿಸಿರುವ 'ತಲ್ವಾರ್' ನಲ್ಲಿ ಕೂಡ ಟಬು ನಟಿಸಿದ್ದು, ಇರ್ಫಾನ್ ಖಾನ್, ಕೊಂಕಣಾ ಸೇನ್ ಶರ್ಮಾ ಮತ್ತು ನೀರಜ್ ಕಾಬಿ ನಟಿಸಿದ್ದರೆ.

೨೦೦೮ ರಲ್ಲಿ ನೋಯ್ಡಾ ದಲ್ಲಿ ನಡೆದಿದ್ದ ಎರಡು ಕೊಲೆಗಳ ಆಧಾರವಾಗಿ 'ತಲ್ವಾರ್' ನಿರ್ಮಿಸಲಾಗಿದ್ದು, ಕೆನಡಾದ ಟೊರೆಂಟೊ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com