ಯರವಾಡ ಜೈಲಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಸಂಜಯ್ ದತ್
ಮುಂಬೈ: 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಜೈಲುವಾಸ ಅನುಭವಿಸಿ ಹೊರ ಬಂದಿರುವ ಬಾಲಿವುಡ್ ನಟ ಸಂಜಯ್ ದತ್ ಪುಣೆಯ ಯಕವಾಡ ಜೈಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಳೆದ 23 ವರ್ಷಗಳಿಂದ ಜೈಲಿನ ಒಳಗೆ, ಹೊರಗೆ ಇದ್ದು ಅನೇಕ ಅನುಭವಗಳನ್ನು ಪಡೆದಿದ್ದೇನೆ, ನಾನು ಜೈಲುವಾಸ ಅನುಭವಿಸಿದ್ದಕ್ಕೆ ನನಗೆ ವಿಷಾಧವಿಲ್ಲ ಎಂದು ಹೇಳಿದ್ದಾರೆ
ಸ್ವತಂತ್ರವಾಗಿ ಅಲೆಡಾಡಿಕೊಂಡಿದ್ದ ದತ್, ಜೈಲಿನಲ್ಲಿ ಏಕಾಂಗಿಯಾಗಿ ಕಾಲಕಳೆಯುತ್ತಿದ್ದರಂತೆ.
ಜೈಲಿನಲ್ಲಿ ಅನೇಕ ನೀತಿ-ನಿಯಮ ಹಾಗೂ ಕಟ್ಟುಪಾಡುಗಳಿಂದ ಬೇಸತ್ತು ಹೋಗಿದ್ದರಂತೆ. ಜೈಲಿನಲ್ಲಿ ಕಳೆದಿರುವ 5 ವರ್ಷಗಳು ತಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿಸಿತ್ತಂತೆ.
ಜೈಲೂಟದ ಬಗ್ಗೆ ಮಾತನಾಡಿರುವ ಸಂಜಯ್ ಆಹಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜೈಲೂಟ ಕೆಟ್ಟದಾಗಿದ್ದು, ಸೇವಿಸಲು ಆಗುತ್ತಿರಲಿಲ್ಲ ಎಂಬ ಕಟು ಸತ್ಯ ಹೊರಹಾಕಿದ್ದಾರೆ.
ಜೈಲರ್ಗಳು ಸಾಮಾನ್ಯ ಕೈದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅಲ್ಲಿನ ನಿರ್ಬಂಧಗಳಿಗೆ ನಾನು ರೋಸಿ ಹೋಗಿದ್ದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಕಳೆದ 5 ವರ್ಷಗಳಲ್ಲಿ ನನಗೆ ಯಾವುದೇ ವಿಐಪಿ ಸವಲತ್ತು ನೀಡಿಲ್ಲ. ನನ್ನನ್ನು ಸಾಮಾನ್ಯ ಕೈದಿಗಳಂತೆ ನಡೆಸಿಕೊಳ್ಳುತ್ತಿದ್ದರು ಎಂದಿದ್ದಾರೆ.