ಇಂದು ಬೆಳಗ್ಗೆಯಷ್ಚೆ ಪಶ್ಚಿಮ ಬಂಗಾಳದ ಮೌಲ್ವಿ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಸೋನು ನಿಗಮ್ ಅವರ ತಲೆ ಬೋಳಿಸಿ, ಅವರ ಕೊರಳಿಗೆ ಹಳೆಯ ಬೂಟುಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರಿಗೆ 10 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ್ದ ಸೋನ್ ನಿಗಮ್ ಇಂದು ಮಧ್ಯಾಹ್ನ 2 ಗಂಟೆಗೆ ನಾನಿರುವಲ್ಲಿಗೆ ಆಲಿಮ್ ಬಂದು ನನ್ನ ತಲೆ ಬೋಳಿಸುತ್ತಾನೆ. ಮೌಲ್ವಿಯವರೆ ನೀವು 10 ಲಕ್ಷ ಸಿದ್ಧ ಮಾಡಿಕೊಂಡಿರಿ. ಈ ಸಂದರ್ಭದ ವರದಿ ಮಾಡಲು ನಾನು ಪತ್ರಕರ್ತರನ್ನು ಸ್ವಾಗತಿಸುವೆ ಎಂದು ಟ್ವೀಟ್ ಮಾಡಿದ್ದರು.