ನವದೆಹಲಿ: ಕೇಂದ್ರ ಸರ್ಕಾರದ ಪ್ರಮೂಖ ಕೃಷಿ ಅಭಿವೃದ್ದಿ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಯ್ಕೆಯಾಗಿದ್ದಾರೆ.
ಕೃಷಿ ಯೋಜನೆಗಳ ಪ್ರಚಾರವನ್ನು ತೀವ್ರಗೊಳಿಸಲು ಟಿವಿ ಜಾಹೀರಾತಿನತ್ತ ಮುಖ ಮಾಡಿರುವ ಕೇಂದ್ರ ಕೃಷಿ ಸಚಿವಾಲಯವು ಅಕ್ಷಯ್ ಕುಮಾರ್ ಅವರನ್ನು ಪ್ರಚಾರ ರಾಯಭಾರಿಯಾಗಿಸಿದೆ. "ರೈತರ ಲಾಭಕ್ಕಾಗಿ ಇರಬಹುದಾದ ಪ್ರಮುಖ ಯೋಜನೆಗಳ ಬಗೆಗೆ ನಾವು ಹೆಚ್ಚು ಅರಿವು ಮೂಡಿಸಲು ಬಯಸುತ್ತೇವೆ, ಇದರಿಂದಾಗಿ ರೈತರು ಲಾಭ ಪಡೆಯುತ್ತಾರೆ. ನಾವು ನಮ್ಮ ಯೋಜನೆಗಳ ವ್ಯಾಪಕ ಪ್ರಚಾರಕ್ಕಾಗಿ ಟಿವಿ ಜಾಹೀರಾತುಗಳಿಗಾಗಿ ಅಕ್ಷಯ್ ಕುಮಾರ್ ಅವರನ್ನು ರಾಯಭಾರಿಯಾಗಿಸಿಕೊಂಡಿದ್ದೇವೆ." ಓರ್ವ ಅಧಿಕಾರಿ ಪಿಟಿಐ ಗೆ ತಿಳಿಸಿದ್ದಾರೆ.
ಮಣ್ಣಿನ ಫಲವತ್ತತೆ ಪರೀಕ್ಷೆ, ಬೆಳೆ ವಿಮೆ ಯೋಜನೆಗಳು, ಪ್ರಧಾನ್ ಮಂತ್ರಿ ಬೆಳೆ ವಿಮಾ ಯೋಜನೆ, ಪರಂಪರಾಗತ ಕೃಷಿ ವಿಕಾಸ್ ಯೋಜನೆಗಳ ಸಂಬಂಧ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅಕ್ಷಯ್ ಕುಮರ್ ಭಾಗವಹಿಸಲಿದ್ದಾರೆ.