ಬಾಲಿವುಡ್ ಗೆ ಆರಾಧ್ಯ: ಐಶ್ವರ್ಯಾ ರೈ- ಅಭಿಷೇಕ್ ನಡುವೆ ಮನಸ್ತಾಪ?

ಬಾಲಿವುಡ್ ತಾರಾ ದಂಪತಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವೆ ಪುತ್ರಿ ಆರಾಧ್ಯ ಸಿನಿಮಾ ರಂಗ ಪ್ರವೇಶಿಸಬೇಕೆ ಬೇಡವೇ ಎಂಬುದರ ಬಗ್ಗೆ ....
ಪುತ್ರಿ ಆರಾಧ್ಯಳೊಂದಿಗೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್
ಪುತ್ರಿ ಆರಾಧ್ಯಳೊಂದಿಗೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್

ಮುಂಬಯಿ: ಬಾಲಿವುಡ್ ತಾರಾ ದಂಪತಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವೆ ಪುತ್ರಿ ಆರಾಧ್ಯ ಸಿನಿಮಾ ರಂಗ ಪ್ರವೇಶಿಸಬೇಕೆ ಬೇಡವೇ ಎಂಬುದರ ಬಗ್ಗೆ ಮನಸ್ತಾಪ ಮೂಡಿದೆ ಎಂದು ಹೇಳಲಾಗಿದೆ.

ತಮ್ಮ ಪುತ್ರಿ ಆರಾಧ್ಯ ಬಾಲನಟಿಯಾಗಿ ಬಾಲಿವುಡ್ ಪ್ರವೇಶಿಸಬೇಕು ಎಂಬುದು ಅಭಿಷೇಕ್ ಬಚ್ಚನ್ ಮಹದಾಸೆಯಾಗಿದೆ. ಆದರೆ ತಮ್ಮ ಮಗಳನ್ನು ಗ್ಲಾಮರ್ ಲೋಕದಿಂದಲೇ ದೂರ ಇಡಬೇಕು ಎಂಬುದು ಐಶ್ವರ್ಯಾ ರೈ ಆಸೆಯಾಗಿದೆ ಎಂದು ವರದಿಯಾಗಿದೆ.

ಮಗಳ ನಟನೆ ಬಗ್ಗೆ ದಂಪತಿಯಲ್ಲಿ ಒಮ್ಮತವಿಲ್ಲ ಎಂದು ಹೇಳಲಾಗಿದೆ. ನನ್ನ ಮಗಳು ಏನಾಗಬೇಕು ಎಂದು ಬಯಸುತ್ತಾಳೋ, ಅವಳು ಯಾವ ಕ್ಷೇತ್ರದ ಬಗ್ಗೆ ಒಲವು ತೋರುತ್ತಾಳೋ ಅದರಂತೆ ಅವಳು ನಡೆಯಲಿ. ನಾನು ಚಿಕ್ಕವನಾಗಿದ್ದಾಗ, ನನಗೇನು ಬೇಕೋ ಅದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿತ್ತು, ನನ್ನ ಮಗಳಿಗೂ ಕೂಡ ಅದೇ ಸ್ವಾತಂತ್ರ್ಯವಿರುತ್ತದೆ ಎಂದು ಅಭಿಷೇಕ್ ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com