ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ 35 ವರ್ಷದ ಕಪಿಲ್ ಶರ್ಮಾ, ಜೀವನದಲ್ಲಿ ಖುಷಿಯಾಗಿರುವ ವೇಳೆ ಈ ಸುದ್ದಿ ಬಂದಿದೆ. ಗಲಾಟೆ ವಿಚಾರ ನನ್ನನ್ನು ಗಾಬರಿಗೊಳಿಸಿದೆ. ಈ ಸುದ್ದಿ ಎಲ್ಲಿಂದ ಬಂತು ಮತ್ತೆ ಇದಕ್ಕೆ ಏನು ಕಾರಣ ಎಂದು ತಿಳಿದುಕೊಂಡ ನಂತರ ಉತ್ತರ ನೀಡಬೇಕು. ಕೆಲವರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಸುನೀಲ್ ನಾನು ಒಟ್ಟಿಗೆ ಇರುತ್ತೇವೆ. ಒಟ್ಟಿಗೆ ಪ್ರಯಾಣ ಮಾಡುತ್ತೀವಿ. ವರ್ಷಕ್ಕೊಮ್ಮೆ ಮಾತ್ರ ನನ್ನ ಸಹೋದರನನ್ನು ಭೇಟಿ ಮಾಡುತ್ತೇನೆ. ಆದರೆ ನಿನ್ನನ್ನು ದಿನಂಪ್ರತಿ ಭೇಟಿ ಮಾಡುತ್ತಿರುತ್ತೇನೆ. ಸುನೀಲ್ ನನ್ನ ಸಹೋದರನಿದ್ದಂತೆ. ನಾನು ನಿನ್ನನ್ನು ಗೌರವಿಸುತ್ತೇನೆ ಎಂದು ಬರೆದುಕೊಂಡಿದ್ದರು.