ಅನೇಕ ವಿವಾದಗಳು ಮತ್ತು ಪ್ರತಿಭಟನೆ ನಂತರ ಇದೀಗ ನಿರ್ದೇಶಕರು ಚಿತ್ರವನ್ನು ವಿಶೇಷ ಸಮಿತಿ ಮುಂದೆ ತೋರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಖಂಡ ರಜಪೂತಾನ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಆರ್ ಪಿ ಸಿಂಗ್, ಬನ್ಸಾಲಿ ಮತ್ತು ರಜಪೂತ ಸಂಘಟನೆಗಳ ಮಧ್ಯವರ್ತಿಯಾಗಿರುವ ಮಹವೀರ ಜೈನ್ ಎಂಬುವವರಿಂದ ಕರೆ ಬಂದಿದ್ದು, ಚಿತ್ರ ಬಿಡುಗಡೆಗೂ ಮುನ್ನ ಇದೇ 15ರಿಂದ 18ರ ನಡುವೆ ಚಿತ್ರವನ್ನು ಸಮಿತಿ ಮುಂದೆ ತೋರಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.