ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಹೆಸರಿಗೆ ಅಭಿಯಾನಿಯೊಬ್ಬರು ವಿಲ್ ಬರೆದು ಸಾವನ್ನಪ್ಪಿದ್ದು, ತನೆಲ್ಲಾ ಆಸ್ತಿಪಾಸ್ತಿಯ ವಾರಸುದಾರರ ಎಂದು ಬ್ಯಾಂಕಿಗೂ ಪತ್ರ ರವಾಸಿದ್ದಾರೆ.ಈ ವಿಷಯ ತಿಳಿದು ಆಶ್ಚರ್ಯಗೊಂಡ ಸಂಜಯ್ ದತ್ ,ಮೃತರ ಕುಟುಂಬಕ್ಕೆ ಅದನ್ನು ಮರಳಿಸುವುದಾಗಿ ಹೇಳಿದ್ದಾರೆ.
ಮಲಬಾರ್ ಹಿಲ್ ನಿವಾಸಿಯಾದ ನಿಶಿ ಹರಿಶ್ಚಂದ್ರ ತ್ರಿಪಾಠಿ ಜನವರಿ 15 ರಂದು ಸಾವನ್ನಪ್ಪಿದ್ದರು. ಆಕೆ ಸಾಯುವ ಮುನ್ನಾ ವಿಲ್ ಬರೆದಿದ್ದು, ಸಂಜಯ್ ದತ್ ತನ್ನೆಲ್ಲಾ ಆಸ್ತಿಪಾಸ್ತಿಯ ವಾರಸುದಾರರ ಎಂದು ಬ್ಯಾಂಕಿಗೆ ಪತ್ರ ಕೂಡಾ ಬರೆದಿದ್ದರು.
ಜನವರಿ 29 ರಂದು ಪೊಲೀಸರು ಈ ವಿಷಯವನ್ನು ಸಂಜಯ್ ದತ್ ಅವರಿಗೆ ತಿಳಿಸಿದ್ದಾರೆ.ಸಂಜಯ್ ದತ್ ಅವರೇ ತಮ್ಮ ಕಾನೂನು ಪ್ರತಿನಿಧಿ ಎಂದು ಬ್ಯಾಂಕ್ ಗೆ ಹೇಳಿಕೆ ನೀಡಿದ್ದು,ಕಾಯಿಲೆಯಿಂದ ನರಳುತ್ತಿರುವ ಕುಟುಂಬಕ್ಕೆ ಎಲ್ಲಾ ಹಣ ನೀಡುವಂತೆ ಆದೇ ಪತ್ರದಲ್ಲಿ ತಿಳಿಸಲಾಗಿದೆ.
ಈ ವಿಷಯದ ಬಗ್ಗೆ ಮಾತನಾಡಲು ಆಕೆಯ ಕುಟುಂಬಸ್ಥರು ನಿರಾಕರಿಸಿದ್ದಾರೆ. ಕಾನೂನು ರೀತಿಯ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಎಲ್ಲಾ ಆಸ್ತಿಪಾಸ್ತಿಯನ್ನು ತ್ರಿಪಾಠಿ ಕುಟುಂಬಕ್ಕೆ ವರ್ಗಾಯಿಸಲಾಗುವುದು ಎಂದು ಸಂಜಯ್ ದತ್ ಪರ ವಕೀಲರು ತಿಳಿಸಿದ್ದಾರೆ.
ಕೆಲ ಅಭಿಮಾನಿಗಳು ತಮ್ಮ ಮಕ್ಕಳಿಗೆ ನೆಚ್ಚಿನ ನಟನ ಹೆಸರನ್ನು ಇಡುವುದನ್ನ ನೋಡಿದ್ದೇವೆ , ಕೇಳಿದ್ದೇವೆ , ಆದರೆ, ಇಂತಹ ಸಂಗತಿಗಳು ಇದೇ ಮೊದಲ ಎಂಬಂತಿದೆ ಎಂದು ಅವರು ಹೇಳಿದ್ದಾರೆ.
Advertisement