ಮಾರಿಜುವಾನ ಕಾನೂನುಬದ್ಧಗೊಳಿಸಿ, ಉದಯ್ ಚೋಪ್ರಾ ಹೇಳಿಕೆಗೆ 'ಹುಷಾರ್ 'ಎಂದ ಪೊಲೀಸರು !

ಮಾದಕ ವಸ್ತು ಮಾರಿಜುವಾನ ಕಾನೂನುಬದ್ಧಗೊಳಿಸುವಂತೆ ದೂಮ್ ಖ್ಯಾತಿಯ ಬಾಲಿವುಡ್ ನಟ ಉದಯ್ ಚೋಪ್ರಾ ಹೇಳಿಕೆ ನೀಡಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಉದಯ್ ಚೋಪ್ರಾ
ಉದಯ್ ಚೋಪ್ರಾ

ಮುಂಬೈ: ಮಾದಕ ವಸ್ತು  ಮಾರಿಜುವಾನ  ಕಾನೂನುಬದ್ಧಗೊಳಿಸುವಂತೆ  ದೂಮ್ ಖ್ಯಾತಿಯ ಬಾಲಿವುಡ್ ನಟ ಉದಯ್ ಚೋಪ್ರಾ ಹೇಳಿಕೆ ನೀಡಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮಾರಿಜುವಾನ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ   ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

ಮಾರಿಜುವಾನ  ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ಕಾನೂನುಬದ್ಧಗೊಳಿಸಬೇಕು , ಅದನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸುವುದರಿಂದ ಹೆಚ್ಚಿನ ಪ್ರಮಾಣದ ಆದಾಯ ಬರುತ್ತದೆ. ಜೊತೆಗೆ  ಹೆಚ್ಚಿನ ಪ್ರಮಾಣದ ವೈದ್ಯಕೀಯ ಅನುಕೂಲವೂ ಆಗಲಿದೆ ಎಂದು ಅವರು ಹೇಳಿದ್ದರು.

 ಉದಯ್ ಚೋಪ್ರಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವಂತೆ ಮುಂಬೈ ಪೊಲೀಸರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದ ನಾಗರಿಕರಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುವಾಗ ಹುಷಾರಾಗಿರಿ.1985ರ ಕಾಯ್ದೆ ಪ್ರಕಾರ  ಮಾರಿಜುವಾನ  ಸೇವನೆ, ಸಂಗ್ರಹ, ಹಾಗೂ ಮಾರಾಟಕ್ಕೆ  ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಚೋಪ್ರಾ ಟ್ವಿಟ್ ಗೆ ಇಂದು ಮದ್ಯಾಹ್ನ 300  ಪ್ರತಿಕ್ರಿಯೆಗಳು ಬಂದಿದ್ದು, 1 ಸಾವಿರ ಲೈಕ್ ಹಾಗೂ ಅನೇಕ ಟೀಕೆಗಳು ಬಂದಿವೆ. ಅನೇಕ ಮಂದಿ ಚೋಪ್ರಾ ಅವರ ದೃಷ್ಟಿ ಹಾಸ್ಯಾಸ್ಪದದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

 ಈ ಟ್ವಿಟ್ ಗಳಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ,  ಮದ್ಯವನ್ನು ಕಾನೂನುಬದ್ಧಗೊಳಿಸದಂತೆ ಏಕೆ ಜನರು ಕೇಳುತ್ತಿಲ್ಲ ಎಂಬ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com