ಮೈದಾನದಲ್ಲಿ ಆಟಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದ್ದ ಶ್ರೀಶಾಂತ್ ಈಗ 'ಬಿಗ್ ಬಾಸ್'ಗೆ ಎಂಟ್ರಿಕೊಟ್ಟಿದ್ದು, ಮನೆಯೊಳಗೆ ಹೋಗುವ ಮುನ್ನ 'ಬಿಗ್ ಬಾಸ್' ನಿರೂಪಕ ಸಲ್ಮಾನ್ ಖಾನ್ ಜೊತೆಗೆ ಮಾತನಾಡಿದರು. ಈ ವೇಳೆ ಕನ್ನಡದ 'ಕೆಂಪೇಗೌಡ-2' ಚಿತ್ರದ ಬಗ್ಗೆ ಶ್ರೀಶಾಂತ್ ಪ್ರಸ್ತಾಪ ಮಾಡಿದ್ದು, 'ದಕ್ಷಿಣ ಭಾರತದಲ್ಲಿ ನಾನು 'ಕೆಂಪೇಗೌಡ-2' ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕಾಯಿತು' ಎಂದು ಶ್ರೀಶಾಂತ್ ಹೇಳಿದರು. ಇದನ್ನ ಕೇಳಿ ಸಲ್ಮಾನ್ ಖಾನ್ ಕೂಡ ಖುಷಿ ಪಟ್ಟರು.