ಬಿಗ್ ಬಾಸ್-12 : ಸಲ್ಮಾನ್ ಮುಂದೆ 'ಕೆಂಪೇಗೌಡ -2' ಬಗ್ಗೆ ಮಾತನಾಡಿದ ಶ್ರೀಶಾಂತ್

ಹಿಂದಿ ಬಿಗ್ ಬಾಸ್ 12ನೇ ಆವೃತ್ತಿ ಭಾನುವಾರದಿಂದ ಆರಂಭವಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ....
ಸಲ್ಮಾನ್ ಖಾನ್ - ಶ್ರೀಶಾಂತ್
ಸಲ್ಮಾನ್ ಖಾನ್ - ಶ್ರೀಶಾಂತ್
ಮುಂಬೈ: ಹಿಂದಿ ಬಿಗ್ ಬಾಸ್ 12ನೇ ಆವೃತ್ತಿ ಭಾನುವಾರದಿಂದ ಆರಂಭವಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಅವರು ಎಂಟ್ರಿಕೊಟ್ಟಿದ್ದಾರೆ. 
ಮೈದಾನದಲ್ಲಿ ಆಟಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದ್ದ ಶ್ರೀಶಾಂತ್ ಈಗ 'ಬಿಗ್ ಬಾಸ್'ಗೆ ಎಂಟ್ರಿಕೊಟ್ಟಿದ್ದು, ಮನೆಯೊಳಗೆ ಹೋಗುವ ಮುನ್ನ 'ಬಿಗ್ ಬಾಸ್' ನಿರೂಪಕ ಸಲ್ಮಾನ್ ಖಾನ್ ಜೊತೆಗೆ ಮಾತನಾಡಿದರು. ಈ ವೇಳೆ ಕನ್ನಡದ 'ಕೆಂಪೇಗೌಡ-2' ಚಿತ್ರದ ಬಗ್ಗೆ ಶ್ರೀಶಾಂತ್ ಪ್ರಸ್ತಾಪ ಮಾಡಿದ್ದು, 'ದಕ್ಷಿಣ ಭಾರತದಲ್ಲಿ ನಾನು 'ಕೆಂಪೇಗೌಡ-2' ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕಾಯಿತು' ಎಂದು ಶ್ರೀಶಾಂತ್ ಹೇಳಿದರು. ಇದನ್ನ ಕೇಳಿ ಸಲ್ಮಾನ್ ಖಾನ್ ಕೂಡ ಖುಷಿ ಪಟ್ಟರು.
ಶ್ರೀಶಾಂತ್ ಹಾಗೂ ಸಲ್ಮಾನ್ ಖಾನ್ ನಡುವಿನ ಸಂವಾದದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನ ಕಂಡು ನಟ ಜಗ್ಗೇಶ್ ಹೆಮ್ಮೆಪಟ್ಟಿದ್ದಾರೆ. 
ನನ್ನ ಸಹೋದರ ಕೋಮಲ್ ನಟಿಸಿರುವ 'ಕೆಂಪೇಗೌಡ-2' ಚಿತ್ರದಲ್ಲಿ ಕ್ರಿಕೆಟಿಗ ಶ್ರೀಶಾಂತ್ ಅವರು ನಟಿಸಿದ್ದು, ಈ ವಿಚಾರವನ್ನು ಅವರು ಸಲ್ಮಾನ್ ಖಾನ್ ತಿಳಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಯಿತು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com