ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಸಾಮಾಜಿಕ ತಾಣದ ಮೂಲಕ ಕಿಡಿಗೇಡಿಗಳು ಜೀವಬೆದರಿಕೆ ಒಡ್ಡಿದ್ದಾರೆ.
ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಹೆಸರಿನ ಫೇಸ್ಬುಕ್ ಪುಟದಲ್ಲಿ ಈ ಬೆದರಿಕೆ ಸಂದೇಶ ಹಾಕಲಾಗಿದೆ.
ಬೆದರಿಕೆ ಪೋಸ್ಟ್ ನಲ್ಲಿ ಸಲ್ಮಾನ್ ಖಾನ್ ಚಿತ್ರವನ್ನು ಕೆಂಪು ಬಣ್ಣದ ತಪ್ಪು ಗುರುತಿನೊಡನೆ (X)ಹಾಕಲಾಗಿದ್ದು : "ಸಲ್ಮಾನ್ ನೀವು ಭಾರತೀಯ ಕಾನೂನಿಗೂ ಎತ್ತರದಲ್ಲಿರುವವರು ಎಂದು ನೀವು ಭಾವಿಸಬಹುದು ಆದರೆ ಆದರೆ ಬಿಷ್ಣೋಯ್ ಸಮುದಾಯ ಮತ್ತು ಸೋಪು ಪಾರ್ಟಿ ನಿಮಗೆ ಮರಣದಂಡನೆ ವಿಧಿಸಿದೆ. ನೀವು ಸೋಪು ನ್ಯಾಯಾಲಯದಲ್ಲಿ ತಪ್ಪಿತಸ್ಥರು . " ಎಂದು ಹೇಳಿದೆ.
ಸೋಪು ಎಂದರೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಆಗಿದ್ದು ಗ್ಯಾರಿ ಶೂಟರ್ ಎಂಬಾತ ಈ ಸಂದೇಶ ಪೋಸ್ಟ್ ಮಾಡಿದ್ದಾನೆ.
ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಾಂಬಂಧಿಸಿ ಸಲ್ಮಾನ್ ಖಾನ್ ಸೆಪ್ಟೆಂಬರ್ 27 ರಂದು ಜೋಧ್ಪುರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಸಲ್ಮಾನ್ ಖಾನ್ ಅವರು ಆ ದಿನ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರ ಜಾಮೀನು ರದ್ದುಪಡಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
Advertisement