ಮಣಿಕರ್ಣಿಕಾ ಸಿನಿಮಾದಲ್ಲಿ ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಪಾತ್ರ ಮಾಡಿದ ಜನಮನಸೆಳೆದಿದ್ದ ಕಂಗನಾ ರಾನಾವತ್ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಕಥೆಯಾಧಾರಿತ ಚಿತ್ರದಲ್ಲಿ ನಟಿಸಲಿದ್ದಾರೆ.
ಅದರ ಹೆಸರು ತಲೈವಿ. ವಿಜಯ್ ನಿರ್ದೇಶನದ ತಲೈವಿ ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ವಿಜೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಕಂಗನಾ ಅವರ ಮಣಿಕರ್ಣಿಕಾ ಚಿತ್ರಕ್ಕೂ ಸಹ ವಿಜೇಂದ್ರ ಪ್ರಸಾದ್ ಅವರೇ ಕಥೆ ಬರೆದಿದ್ದರು.
ಚಿತ್ರಕ್ಕೆ ಜಯಲಲಿತಾ ಅವರ ಜೀವನದ ನಿಖರ ಮಾಹಿತಿಗಳು ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಸತತ 9 ತಿಂಗಳುಗಳ ಕಾಲ ಸಂಶೋಧನೆ ನಡೆಸಿದೆಯಂತೆ. ಫೆಬ್ರವರಿ 24ರಂದು ಜಯಲಲಿತಾ ಅವರ ಹುಟ್ಟುಹಬ್ಬದ ದಿನ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
ಹಿಂದಿಯಲ್ಲಿ ಕೂಡ ಜಯ ಶೀರ್ಷಿಕೆಯಡಿ ಚಿತ್ರ ತಯಾರಾಗುತ್ತಿದೆ. ವಿಷ್ಣುವರ್ಧನ್ ಇದುರಿ ಮತ್ತು ಶೈಲೇಶ್ ಆರ್ ಸಿಂಗ್ ವಿಬ್ರಿ ಮತ್ತು ಕರ್ಮ ಮೀಡಿಯಾ ಎಂಟರ್ಟೈನ್ ಮೆಂಟ್ ನಡಿ ತಯಾರಾಗುತ್ತಿರುವ ಜಯಲಲಿತಾ ಕಥೆಯಾಧಾರಿತ ಚಿತ್ರಕ್ಕೆ ಜಿ ವಿ ಪ್ರಕಾಶ್ ಅವರ ಸಂಗೀತ ಮತ್ತು ನೀರವ್ ಶಾ ಅವರ ಸಂಗೀತವಿದೆ.