ಲಕ್ನೋ: ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಸಂಕಷ್ಟ ಎದುರಾಗಿದೆ, ಗಾಜಿಯಾಬಾದ್ ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜಾರ್ ಕಾರ್ಯಕ್ರಮ ರದ್ದುಗೊಳಿಸುವಂತೆ ಕೋರಿದ್ದಾರೆ.
ಬಿಗ್ ಬಾಸ್ ಶೋ ನಿಷೇಧಿಸುವಂತೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.
ಕಾರ್ಯಕ್ರಮವನ್ನು ಎಲ್ಲಾ ವಯೋಮಾನದವರೂ ವೀಕ್ಷಿಸುವ ಕಾರಣ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಆಗಲೇಬೇಕು ಎಂದು ಪತ್ರದಲ್ಲಿ ತಿಳಿಸಿದೆ. ಅಶ್ಲೀಲ, ಅಸಭ್ಯ, ಪೋಲಿತನಕ್ಕೆ ಕೇರ್ ಆಫ್ ಅಡ್ರೆಸ್ನಂತಾಗಿದೆ, "ನಮ್ಮ ದೇಶ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದೆ. ಟಿಆರ್ಪಿ ಹಾಗೂ ಲಾಭಾಪೇಕ್ಷೆಗಾಗಿ ಇವನ್ನೆಲ್ಲಾ ಗಾಳಿಗೆ ತೂರಲಾಗುತ್ತಿದೆ ಎಂದು ಬರೆದಿದ್ದಾರೆ.
ಬಿಗ್ ಬಾಸ್ ಶೋ ನಿಷೇಧಿಸುವವರೆಗೂ ತಾವು ಯಾವುದೇ ರೀತಿಯ ಧಾನ್ಯದಿಂದ ತಯಾರಿಸಿದ ಆಹಾರ ಸೇವಿಸುವುದಿಲ್ಲ, ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುವುದಾಗಿ ಉತ್ತರ ಪ್ರದೇಶ ನವ ನಿರ್ಮಾಣ ಸೇನೆ ಅಧ್ಯಕ್ಷ ಅಮಿತ್ ಜೈನ್ ಹೇಳಿದ್ದಾರೆ.
Advertisement