ನಟಿ ಕಿರಣ್ ಖೇರ್
ಬಾಲಿವುಡ್
ನಟಿ, ರಾಜಕಾರಣಿ ಕಿರಣ್ ಖೇರ್ ಎಂಪಿ ಲ್ಯಾಡ್ಸ್ ನಿಧಿಯಿಂದ ಚಂಡೀಗಢಕ್ಕೆ ವೆಂಟಿಲೇಟರ್ ಗಳಿಗಾಗಿ 1 ಕೋಟಿ ರೂ. ಬಿಡುಗಡೆ
ನಟಿ, ರಾಜಕಾರಣಿ ಕಿರಣ್ ಖೇರ್ ತಮ್ಮ ಎಂಪಿ ಲ್ಯಾಡ್ಸ್ (ಪ್ರದೇಶಾಭಿವೃದ್ಧಿ ಯೋಜನೆ)ಯಿಂದ 1 ಕೋಟಿ ರೂಪಾಯಿ ಹಣವನ್ನು ಚಂಡೀಗಢಕ್ಕೆ ವೆಂಟಿಲೇಟರ್ ಗಳಿಗಾಗಿ ನೀಡಿದ್ದಾರೆ.
ನಟಿ, ರಾಜಕಾರಣಿ ಕಿರಣ್ ಖೇರ್ ತಮ್ಮ ಎಂಪಿ ಲ್ಯಾಡ್ಸ್ (ಪ್ರದೇಶಾಭಿವೃದ್ಧಿ ಯೋಜನೆ)ಯಿಂದ 1 ಕೋಟಿ ರೂಪಾಯಿ ಹಣವನ್ನು ಚಂಡೀಗಢಕ್ಕೆ ವೆಂಟಿಲೇಟರ್ ಗಳಿಗಾಗಿ ನೀಡಿದ್ದಾರೆ.
ಕೊರೋನಾ ವೈರಸ್ ನ ಹಿನ್ನೆಲೆಯಲ್ಲಿ ಕಿರಣ್ ಖೇರ್ ಆಕ್ಸಿಜನ್ ಪೂರೈಕೆಗಾಗಿ ಖೇರ್ ಹಣ ನೀಡಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಕಿರಣ್ ಖೇರ್ ಘೋಷಿಸಿ, ದೇಣಿಗೆ ನೀಡಿದ್ದೇನೆ ಎಂದು ಹೇಳಿದ್ದರು. ಆದರೆ ಸಂಸದರ ನಿಧಿಯಿಂದ ನೀಡಿರುವುದರಿಂದಾಗಿ ದೇಣಿಗೆ ಎಂಬ ಶಬ್ದ ಉಪಯೋಗಿಸಿದ್ದಕ್ಕೆ ಹಲವರು ಆಕ್ಷೇಪಿಸಿದ್ದರು. ನಂತರ ಮತ್ತೊಂದು ಪೋಸ್ಟ್ ನಲ್ಲಿ ತಪ್ಪನ್ನು ಸರಿಪಡಿಸಿ ಕಿರಣ್ ಖೇರ್ ಟ್ವೀಟ್ ಮಾಡಿದ್ದಾರೆ. ಕಿರಣ್ ಖೇರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ