‘Kala Hiran’ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಸಲ್ಮಾನ್ ಖಾನ್ ! ಬೆದರಿಸುವ ತಂತ್ರ ಎಂದ ನಿರ್ಮಾಪಕರು ಏನಿದು ವಿವಾದ?

ಲೀಗಲ್ ನೋಟಿಸ್ ನ್ನು ಫೇಸ್ ಬುಕ್ ನಲ್ಲಿ ನಿರ್ಮಾಪಕ ಅಮಿತ್ ಜಾನಿ, ಇದು ಬೆದರಿಸುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸುವ ಮೂಲಕ ಜನರನ್ನು ಬೆದರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Salman Khan
ಸಲ್ಮಾನ್ ಖಾನ್
Updated on

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ 'ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ' ಚಿತ್ರದ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಿತ್ರ ಬಿಡುಗಡೆಗೆ ತಡೆ ಬಯಸಿದ್ದಾರೆ.

ಚಿತ್ರದ ಎಲ್ಲಾ ಪೋಸ್ಟರ್‌ಗಳು, ಪ್ರಚಾರ ಸಾಧನಗಳು ಮತ್ತು ಹೆಸರನ್ನು ತಕ್ಷಣ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರ್ರೆ ಮತ್ತಷ್ಟು ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಕಳುಹಿಸಿರುವ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಲೀಗಲ್ ನೋಟಿಸ್ ನ್ನು ಫೇಸ್ ಬುಕ್ ನಲ್ಲಿ ನಿರ್ಮಾಪಕ ಅಮಿತ್ ಜಾನಿ, ಇದು ಬೆದರಿಸುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸುವ ಮೂಲಕ ಜನರನ್ನು ಬೆದರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜನರನ್ನು ಎದುರಿಸುದು ಈ ಲೀಗಲ್ ನೋಟಿಸ್ ನ ಉದ್ದೇಶ. ನಟರ ಮುಂದೆ ತಲೆಬಾಗಬೇಕು ಎಂದು ಅವರು ಅಂದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

'ಕಾಲಾ ಹಿರನ್ ಸಲ್ಮಾನ್ ಖಾನ್ ಅವರ 1998 ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾಗಿದೆ ಎಂಬ ಅಂಶ ತಿಳಿದುಬಂದ ನಂತರ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನೋಟಿಸ್‌ನ ಒಂದು ಭಾಗ ಹೇಳುತ್ತದೆ. ಈ ಚಿತ್ರ ಕೃಷ್ಣ ಮೃಗ ಭೇಟಿ ಪ್ರಕರಣದಿಂದ ಪ್ರೇರಿತವಾಗಿದೆ ಎಂಬುದು ಗಮನಕ್ಕೆ ಬಂದ ನಂತರ ನಮ್ಮ ಕಕ್ಷಿದಾರರ ಆಘಾತ ಮತ್ತು ನಿರಾಶೆಗೆ ಕಾರಣವಾಗಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

Salman Khan
ಬಹಿರಂಗ ಕ್ಷಮೆಯಾಚಿಸಿದ ಪಾಪರಾಜಿಗಳು: ಮುಗುಳ್ನಗುತ್ತಲೇ ಕ್ಷಮಿಸಿದ ಸಲ್ಮಾನ್ ಖಾನ್; ಅಭಿಮಾನಿಗಳ ಮೆಚ್ಚುಗೆ..!

ನೋಟಿಸ್ ಹೊರತಾಗಿಯೂ ನಿರ್ಮಾಪಕರು ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ಭರತ್ ಎಸ್ ಶ್ರೀನೇಟ್ ನಿರ್ದೇಶಿಸಿದ್ದಾರೆ ಮತ್ತು ಅಮಿತ್ ಜಾನಿ ನಿರ್ಮಿಸಿದ್ದಾರೆ.

X

Advertisement

X
Kannada Prabha
www.kannadaprabha.com