ವಿವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಚಿರಾಯು’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
`ಒರಟ ಐ ಲವ್ ಯು` ಚಿತ್ರದ ಮೂಲಕ ಖ್ಯಾತರಾಗಿರುವ ಪ್ರಶಾಂತ್ ಈ ಚಿತ್ರದ ನಾಯಕ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಒರಟ ಪ್ರಶಾಂತ್ ಈ ಚಿತ್ರದ ನಿರ್ಮಾಪಕರು ಹೌದು.
ಶುಭಾ ಪುಂಜಾ, ಅವಿನಾಶ್, ಮುನಿ, ಪವಿತ್ರಲೋಕೇಶ್, ರಾಮಕೃಷ್ಣ, ಪದ್ಮವಾಸಂತಿ, ನವೀನ್ಕೃಷ್ಣ, ಮಾನಸಿ, ಅನುಗೌಡ, ಕೋಟೆ ಪ್ರಭಾಕರ್, ಓಂಪ್ರಕಾಶ್ರಾವ್, ಹೊನವಳ್ಳಿ ಕೃಷ್ಣ, ಮಮತಾ ರಾವುತ್ ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
`ಚಿರಾಯು’ ಚಿತ್ರಕ್ಕೆ ಜಿ.ಆರ್.ಶಂಕರ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್, ಹೇಮಂತ್, ಜಿ.ಆರ್.ಶಂಕರ್ ಹಾಗೂ ಶಿವನಂಜೇಗೌಡ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗೇಂದ್ರ ಅರಸ್ ಸಂಕಲನ, ಹೈಟ್ ಮಂಜು, ಆನಂದ್, ಅರವಿಂದ್ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್, ಥ್ರಿಲ್ಲರ್ ಮಂಜು, ನಂಜುಂಡಿ ನಾಗರಾಜ್ ಸಾಹಸ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
Advertisement