ಭಜರಂಗಿ ಚಿತ್ರದ ಯಶಸ್ಸಿನ ನಂತರ ಶಿವಣ್ಣ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಶನ್ನಲ್ಲಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ವಜ್ರಕಾಯದ ಹಾಡುಗಳು ಇಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಚಿತ್ರದ ಪ್ರಮೋಷನ್ ಗೂ ಮುನ್ನ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನವನ್ನು ಚಿತ್ರದತ್ತ ಸೆಳೆಯಲು ಚಿತ್ರತಂಡ ಮಾಡುವ ಮೊದಲ ಕಸರತ್ತು. ಈ ನಿಟ್ಟಿನಿಂದ ವಜ್ರಕಾಯ ಚಿತ್ರದ ಧ್ವನಿಸುರುಳಿ ಅದ್ಧೂರಿಯಾಗಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ನಿರ್ದೇಶಕ ಹರ್ಷ.
ಬೆಂಗಳೂರು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ಸಂಜೆ ಧ್ವನಿಸುರುಳಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ನಟ ನಟಿಯರು ಭಾಗವಹಿಸಲಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಇದು ಅವರ ಸಂಗೀತ ನಿರ್ದೇಶನದ 50ನೇ ಸಿನಿಮಾ. ಸಿ.ಆರ್ ಮನೋಹರ್ ಈ ಚಿತ್ರದ ನಿರ್ಮಾಪಕರಾಗಿದ್ದು, ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ. ಮತ್ತೂಂದು ವಿಶೇಷವೆಂದರೆ ತಮಿಳು ನಟ ಧನುಶ್ "ವಜ್ರಕಾಯ' ದ ಒಂದು ಹಾಡನ್ನು ಹಾಡಿದ್ದಾರೆ. ಜೊತೆಗೆ ನಟ ಶರಣ್ ಕೂಡಾ ಒಂದು ಹಾಡನ್ನು ಹಾಡಿದ್ದಾರೆನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿಯೂ "ವಜ್ರಕಾಯ' ಆಡಿಯೋ ಮೇಲೆ ಒಂದಷ್ಟು ನಿರೀಕ್ಷೆ ಇದೆ.
Advertisement