ರಾಜಮೌಳಿ ಬಿಚ್ಚಿಟ್ಟರು ಕಟ್ಟಪ್ಪ ಬಾಹುಬಲಿಯನ್ನು ಕೊಂದ ರಹಸ್ಯ

ಎಸ್ಎಸ್ ರಾಜಮೌಳಿ ನಿರ್ದೇಶನದ ಅದ್ದೂರಿ ವೆಚ್ಚದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದ್ದು, ಚಿತ್ರ ನೋಡಿದ ಪ್ರತಿಯೊಬ್ಬರಿಗೂ...
ಬಾಹುಬಲಿ ಚಿತ್ರದ ಕಟ್ಟಪ್ಪ
ಬಾಹುಬಲಿ ಚಿತ್ರದ ಕಟ್ಟಪ್ಪ
ಹೈದರಾಬಾದ್: ಎಸ್ಎಸ್ ರಾಜಮೌಳಿ ನಿರ್ದೇಶನದ ಅದ್ದೂರಿ ವೆಚ್ಚದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದ್ದು, ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆಯೆಂದರೆ ರಾಜಮನೆತನದ ನಂಬಿಕಸ್ಥ ಕಟ್ಟಪ್ಪ ಬಾಹುಬಲಿಯನ್ನು ಕೊಂದದ್ದು ಯಾಕೆ ಎಂಬ ಪ್ರಶ್ನೆ. ಈ ಪ್ರಶ್ನೆಗೆ ರಾಜಮೌಳಿ ನೀಡುವ ಉತ್ತರ ಹೀಗಿದೆ. 
ನಿರ್ದೇಶಕ ರಾಜಮೌಳಿ ಬಾಹುಬಲಿ ಚಿತ್ರವನ್ನು ಮಾಡುವಾಗಲೇ ಬಾಹುಬಲಿ-2 ಚಿತ್ರಕ್ಕೆ ಪ್ಲಾನ್ ಹಾಕಿದ್ದರು. ಚಿತ್ರತಂಡದೊಂದಿಗೆ ಚರ್ಚೆ ಮಾಡಿ ಭಾಗ-1ನ್ನು ಶಿವಗಾಮಿ (ರಮ್ಯಕೃಷ್ಣ) ಮಾಹಿಷ್ಮತಿ ರಾಜ್ಯದ ಉತ್ತರಾಧಿಕಾರಿಯಾಗಿ ಬಾಹುಬಲಿ ಹೆಸರನ್ನು ಘೋಷಣೆ ಮಾಡುವ ಮೂಲಕ ಚಿತ್ರಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದರಂತೆ. ರಾಜಮೌಳಿಯವರ ಈ ಕ್ಲೈಮ್ಯಾಕ್ಸ್ ಚಿತ್ರತಂಡದ ಪ್ರತಿಯೊಬ್ಬರು ಒಪ್ಪಿಕೊಂಡಿದ್ದರು.
ನಂತರ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಬೇಕಾದರೆ ಚಿತ್ರದ ಮುಕ್ತಾಯ ಬೇರೆ ಮಾಡಬೇಕು ಎಂಬ ಆಲೋಚನೆ ಬಳಿಕ ರಾಜಮೌಳಿ ಶಿವುಡು(ಪ್ರಭಾಸ್)ನಿಗೆ ಕಟ್ಟಪ್ಪನೇ ಬಾಹುಬಲಿಯನ್ನು ಕೊಂದದ್ದು ನಾನೇ ಎಂದು ಹೇಳುವ ಮೂಲಕ ಚಿತ್ರಕ್ಕೆ ಶುಭಂ ಹೇಳಿದರೆ ಚೆನ್ನಾಗಿ ಇರುತ್ತದೆ ಎಂದು ಭಾವಿಸಿ ಈ ಕ್ಲೈಮ್ಯಾಕ್ಸ್ ದೃಶ್ಯವನ್ನು ಸೇರಿಸಿದ್ದಾರೆ.
ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ? ಎಂಬ ಪ್ರಶ್ನೆಯೇ ಈಗ ಸೂಪರ್ ಹಿಟ್ ಆಗಿದ್ದು, ಈ ಕ್ಲೈಮಾಕ್ಸ್ ನೋಡಿದ ಬಳಿಕ ಚಿತ್ರಪ್ರೇಮಿಗಳು ಕಟ್ಟಪ್ಪನ ಪಾತ್ರವನ್ನು ನೋಡಲೆಂದೇ ಮತ್ತೊಮ್ಮೆ ಬಾಹುಬಲಿ-2ನ್ನು ವೀಕ್ಷಿಸಲು ಥಿಯೇಟರ್‍ಗೆ ಆಗಮಿಸಲಿದ್ದಾರೆ ಎಂದು ರಾಜಮೌಳಿ ಖಾಸಗಿ ಚಾನೆಲ್'ವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com