ಬೆಂಗಳೂರು: ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಜನ್ಮದಿನ ಆಚರಣೆ ಆಗಸ್ಟ್ 16 ರಂದು ನಡೆದಿದ್ದು, ಕ್ರೇಜಿಸ್ಟಾರ್ ಮನೆಗೆ ಸ್ಪೆಷಲ್ ಗೆಸ್ಟ್ ಆಗಮಿಸಿದ್ದರು, ಹುಟ್ಟುಹಬ್ಬದ ಅಂಗವಾಗಿ ವಿಕ್ರಮ್ ಗೆ ತಂದೆಯಿಂದ ಹುಂಡೈ ಕ್ರಿಟಾ ಕಾರು ವಿಶೇಷ ಉಡುಗೊರೆಯಾಗಿ ಸಿಕ್ಕರೆ, ವಿಶೆಷ ಅಥಿತಿಯಾಗಿ ನಟಿ ಖುಷ್ಬು ಆಗಮಿಸಿದ್ದರು.
ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಪರ ಪ್ರಚಾರ ಮಾಡುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಖುಷ್ಬು ರವಿಚಂದ್ರನ್ ರ ಮಗ ವಿಕ್ರಮ್ ಗೆ ಶುಭಾಷಯ ಕೋರಿದರು. ಇದೇ ವೇಳೆ ನಟಿ ಸರೋಜಾ ದೇವಿ ಅವರನ್ನೂ ಭೇಟಿ ಮಾಡಿದರು.
ರವಿಚಂದ್ರನ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಖುಷ್ಬು ಪಾಲ್ಗೊಂಡು ಬಿಬಿಎಂಪಿ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡರು. ಖುಷ್ಬು, ರವಿಚಂದ್ರನ್ ಅವರ ರಣಧೀರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದು ರವಿಚಂದ್ರನ್ ಅವರನ್ನು ತಮ್ಮ ಮಾರ್ಗದರ್ಶಕರೆಂದೇ ಪರಿಗಣಿಸಿದ್ದಾರೆ.
Advertisement