ಬಾಹುಬಲಿ 3ನೇ ಭಾಗದಲ್ಲಿ ಪ್ರಭಾಸ್ ಇಲ್ಲ: ವಿಜಯೇಂದ್ರ ಪ್ರಸಾದ್

ಬಾಹುಬಲಿ ಚಿತ್ರದ ಬಾಹುವಿನಂತಿದ್ದ ಪ್ರಭಾಸ್ ಚಿತ್ರದ ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಚಿತ್ರದ ಕತೆಗಾರ ನಿರ್ದೇಶದ ಎಸ್ಎಸ್ ರಾಜಮೌಳಿ...
ಪ್ರಭಾಸ್
ಪ್ರಭಾಸ್
Updated on

ಬಾಹುಬಲಿ ಚಿತ್ರದ ಬಾಹುವಿನಂತಿದ್ದ ಪ್ರಭಾಸ್ ಚಿತ್ರದ ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಚಿತ್ರದ ಕತೆಗಾರ ನಿರ್ದೇಶದ ಎಸ್ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

ಬಾಹುಬಲಿ ಹಾಗೂ ಬಾಹುಬಲಿ-2 ಚಿತ್ರದಲ್ಲಿ ಮಿಂಚುತ್ತಿರುವ ಪ್ರಭಾಸ್ ಮೂರನೇ ಆವೃತಿಗೆ ಇರುವುದಿಲ್ಲ ಎಂಬ ಸುದ್ದಿ ಪ್ರಭಾಸ್ ಅಭಿಮಾನಿಗಳಿಗೆ ಶಾಕ್ ಹೊಡೆದಂತಾಗಿದೆ.

ಬಾಹುಬಲಿ ಮೂರನೇ ಭಾಗದಲ್ಲಿ ಕಥೆ ಸಂಪೂರ್ಣ ಭಿನ್ನವಾಗಿದೆ. ಪ್ರಭಾಸ್ ಅವರಿಗೆ ಈ ಚಿತ್ರದಲ್ಲಿ ಪಾತ್ರವಿಲ್ಲ. ಹಾಗೆಯೇ ಚಿತ್ರದ ಜೀವಾಳವಾಗಿರುವ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕೂಡ ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವಿಜಯೇಂದ್ರ ಪ್ರಸಾದ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಜುಲೈನಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಬಾಲಿವುಡ್ ನಲ್ಲಿದ್ದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಯಶಸ್ಸಿನ ನಾಗಾಲೋಟ ಮುಂದುವರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com