'ಛತ್ರಪತಿ ಶಿವಾಜಿ'ಯನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ: ರಿತೇಶ್

ಕಳೆದ ಬಾರಿಗೆ 'ಬಂಗಿಸ್ತಾನ್' ಸಿನೆಮಾದಲ್ಲಿ ಕಾಣಿಸಿಕೊಂಡ ನಟ ರಿತೇಶ್ ದೇಶಮುಖ್ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ
ನಟ ರಿತೇಶ್ ದೇಶಮುಖ್
ನಟ ರಿತೇಶ್ ದೇಶಮುಖ್
Updated on

ಮುಂಬೈ: ಕಳೆದ ಬಾರಿಗೆ 'ಬಂಗಿಸ್ತಾನ್' ಸಿನೆಮಾದಲ್ಲಿ ಕಾಣಿಸಿಕೊಂಡ ನಟ ರಿತೇಶ್ ದೇಶಮುಖ್ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 'ಛತ್ರಪತಿ ಶಿವಾಜಿ' ಸಿನೆಮಾವನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜಾಧವ್ ಅವರು ಈ ಹಿಂದೆ 'ಬಾಲಕ್-ಪಾಲಕ್' ಮತ್ತು 'ಸೌಂಡ್ ಆಫ್ ಹೆವೆನ್: ದ ಸ್ಟೋರಿ ಆಫ್ ಬಾಲಗಂಧರ್ವ' ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ.

ರಿತೇಶ್ ಮತ್ತು ಅವರ ಪತ್ನಿ ಒಡೆತನದ ಮುಂಬೈ ಫಿಲ್ಮ್ ಕಾರ್ಪೊರೇಶನ್ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದೆ.

ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಘೋಷಿಸಿರುವ ನಟ "ಮುಂಬೈ ಫಿಲ್ಮ್ ಕಂಪನಿ' ರವಿ ಜಾಧವ್ ನಿರ್ದೇಶನದ ಛತ್ರಪತಿ ಶಿವಾಜಿ ನಿರ್ಮಿಸುತ್ತಿರುವುದನ್ನು ಘೋಷಿಸುವುದಕ್ಕೆ ಹೆಮ್ಮೆ ಎಂದೆನಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.

'ಮಸ್ತಿ' ನಟ ಮರಾಠಾ ಸೇನಾನಿ ಛತ್ರಪತಿ ಶಿವಾಜಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com