'ಛತ್ರಪತಿ ಶಿವಾಜಿ'ಯನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ: ರಿತೇಶ್

ಕಳೆದ ಬಾರಿಗೆ 'ಬಂಗಿಸ್ತಾನ್' ಸಿನೆಮಾದಲ್ಲಿ ಕಾಣಿಸಿಕೊಂಡ ನಟ ರಿತೇಶ್ ದೇಶಮುಖ್ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ
ನಟ ರಿತೇಶ್ ದೇಶಮುಖ್
ನಟ ರಿತೇಶ್ ದೇಶಮುಖ್

ಮುಂಬೈ: ಕಳೆದ ಬಾರಿಗೆ 'ಬಂಗಿಸ್ತಾನ್' ಸಿನೆಮಾದಲ್ಲಿ ಕಾಣಿಸಿಕೊಂಡ ನಟ ರಿತೇಶ್ ದೇಶಮುಖ್ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ 'ಛತ್ರಪತಿ ಶಿವಾಜಿ' ಸಿನೆಮಾವನ್ನು ರವಿ ಜಾಧವ್ ನಿರ್ದೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜಾಧವ್ ಅವರು ಈ ಹಿಂದೆ 'ಬಾಲಕ್-ಪಾಲಕ್' ಮತ್ತು 'ಸೌಂಡ್ ಆಫ್ ಹೆವೆನ್: ದ ಸ್ಟೋರಿ ಆಫ್ ಬಾಲಗಂಧರ್ವ' ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ.

ರಿತೇಶ್ ಮತ್ತು ಅವರ ಪತ್ನಿ ಒಡೆತನದ ಮುಂಬೈ ಫಿಲ್ಮ್ ಕಾರ್ಪೊರೇಶನ್ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದೆ.

ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಘೋಷಿಸಿರುವ ನಟ "ಮುಂಬೈ ಫಿಲ್ಮ್ ಕಂಪನಿ' ರವಿ ಜಾಧವ್ ನಿರ್ದೇಶನದ ಛತ್ರಪತಿ ಶಿವಾಜಿ ನಿರ್ಮಿಸುತ್ತಿರುವುದನ್ನು ಘೋಷಿಸುವುದಕ್ಕೆ ಹೆಮ್ಮೆ ಎಂದೆನಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.

'ಮಸ್ತಿ' ನಟ ಮರಾಠಾ ಸೇನಾನಿ ಛತ್ರಪತಿ ಶಿವಾಜಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com