ನವದೆಹಲಿ:ಆರುಷಿ ತಲ್ವಾರ್ ಹತ್ಯೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ ಚಿತ್ರ 'ತಲ್ವಾರ್' ನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವೀಕ್ಷಿಸಲಿದ್ದಾರೆ.
ರಾಷ್ಟ್ರಪತಿ ಭವನದ ಅಧಿಕಾರಿಗಳು ತಲ್ವಾರ್ ಚಿತ್ರ ನಿರ್ದೇಶಕಿ ಮೇಘನ ಗುಲ್ಜಾರ್ ಅವರನ್ನು ಸಂಪರ್ಕಿಸಿದ್ದು ರಾಷ್ಟ್ರಪತಿ ಭವನದಲ್ಲಿ ಅ.25 ಕ್ಕೆ ಸಿನಿಮಾ ಪ್ರದರ್ಶನ ಆಯೋಜಿಸುವಂತೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಘನಾ ಗುಲ್ಕಾರ್, ರಾಷ್ಟ್ರಪತಿಗೆ ಸಿನಿಮಾ ಪ್ರದರ್ಶನ ಆಯೋಜಿಸಲು ಆಹ್ವಾನ ಬಂದಿರುವುದು ಹೆಮ್ಮೆಯ ವಿಷಯ ಶೀಘ್ರವೇ ಪ್ರದರ್ಶನ ಆಯೋಜಿಸುವುದಾಗಿ ತಿಳಿಸಿದ್ದಾರೆ.
ಸಿನಿಮಾದ ಕಲಾವಿದರು, ಲೇಖಕ ವಿಶಾಲ್ ಭಾರದ್ವಾಜ್, ನಟ ಇರ್ಫಾನ್, ಕೊಂಕಣಾ ಸೇನ್ ಶರ್ಮಾ, ನೀರಜ್ ಕಬಿ ಹಾಗೂ ಶೌನಂ ಷಾ ರಾಷ್ಟ್ರಪತಿಯೊಂದಿಗೆ ಸಿನಿಮಾ ಪ್ರದರ್ಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
Advertisement