ಈ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು, ಅವರು ಮುತ್ತಪ್ಪ ರೈ ಪಾತ್ರ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನು ಸ್ವತಃ ವರ್ಮಾ ಹೇಳಿಕೊಂಡರು. ಕೆಲ ದಿನಗಳ ನಂತರ ಈ ಚಿತ್ರಕ್ಕೆ 'ಅಪ್ಪ' ಎನ್ನುವ ಶೀರ್ಷಿಕೆಯನ್ನು ಕಾಯಂ ಮಾಡಿದ ವರ್ಮಾ, ಈಗ ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮುತ್ತಪ್ಪ ರೈ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿಯನ್ನು ಕೆಲವರು ಸುಳ್ಳು ಎಂದರು. ಆದರೆ, ಈಗ ಚಿತ್ರದ ಹೆಸರು ಬದಲಾಗಿರುವುದು ನೋಡಿದರೆ, ವರ್ಮಾರ ಈ ಭೂಗತ ಸಿನಿಮಾದ ಕಥೆಯ ಕೇಂದ್ರಬಿಂದು ಮುತ್ತಪ್ಪ ರೈ ಅವರೇ ಎನ್ನುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ.