ಬೈಕ್ ಕೊಂಡದ್ದು ಬಿಡಿ; 'ನಟರಾಜ ಸರ್ವಿಸ್' ಅರ್ಪಿಸಲಿರುವ ಪುನೀತ್
ಬೆಂಗಳೂರು: ಇತ್ತೀಚೆಗಷ್ಟೇ ಐಶಾರಾಮಿ ಬೈಕೊಂದನ್ನು ಕೊಂಡು ಸುದ್ದಿಯಲ್ಲಿದ್ದ ನಟ ಪುನೀತ್ ರಾಜಕುಮಾರ್ ಅವರು ಅರ್ಪಿಸಲಿರುವ ಹೊಸ ಚಿತ್ರದ ಹೆಸರು 'ನಟರಾಜ ಸರ್ವಿಸ್'. ಈ ಯೋಜನೆಗಾಗಿ ಜೊತೆಗೂಡಿರುವವರು ಎನ್ ಎಸ್ ರಾಜಕುಮಾರ್, ಪವನ್ ಒಡೆಯರ್ ಮತ್ತು ಪುನೀತ್.
ರಾಜಕುಮಾರ್ ಈ ಹಿಂದೆ ಪುನೀತ್ ಅವರ ಪೃಥ್ವಿ ಮತ್ತು ಮೈತ್ರಿ ಚಿತ್ರದ ನಿರ್ಮಾಪಕರು. ಪವನ್ ಒಡೆಯರ್, ಪುನೀತ್ ಅವರ 'ರಣವಿಕ್ರಮ' ನಿರ್ದೇಶಿಸಿದ್ದರು. ಈಗ ಈ ಚಿತ್ರೋದ್ಯಮತ್ರಯರು ಒಟ್ಟುಗೂಡಿ ಮ್ಯಾಜಿಕ್ ಮಾಡಲಿದ್ದಾರೆಯೇ? ಆದರೆ ನಾಯಕ ನಟ ನಟಿ ಹಾಗು ಉಳಿದ ಪಾತ್ರವರ್ಗದ ಶೋಧನೆ ನಡೆಯುತ್ತಿದೆ ಎನ್ನಲಾಗಿದೆ.
ಇದು ರೋಮ್ಯಾಂಟಿಕ್ ಹಾಸ್ಯ ಚಿತ್ರ ಎನ್ನಲಾಗಿದ್ದು, ಪಾತ್ರವರ್ಗವನ್ನು ಅಂತಿಮಗೊಳಿಸಲಾಗುತ್ತಿದೆ. ಪವನ್ ಒಡೆಯರ್ ಸಿನೆಮಾಗೆ ಚಿತ್ರಕತೆ ಬರೆದಿದ್ದು, ಸಿನೆಮಾದ ಎಳೆಯ ಗುಟ್ಟು ಬಿಚ್ಚಿಡದಂತೆ ಚಿತ್ರ ತಂಡ ತುಟಿ ಮುಚ್ಚಿದೆ.
ಪವನ್ ಅವರು ತಮ್ಮ 'ಜೆಸ್ಸಿ' ಚಲನಚಿತ್ರದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಈ ಸಿನೆಮಾ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆಯಂತೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ