ಅನನ್ಯಾ ಕಾಸರವಳ್ಳಿಯವರ 'ಹರಿಕಥಾ ಪ್ರಸಂಗ'

ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ನಿರ್ದೇಶನಕ್ಕೆ ಇಳಿದಿದ್ದಾರೆ. ಯಕ್ಷಗಾನ ಸ್ತ್ರೀ ಪಾತ್ರಧಾರಿ ಕಥಾ ಹಂದರವುಳ್ಳ 'ಹರಿಕಥಾ ಪ್ರಸಂಗ'
ಅನನ್ಯ ಮತ್ತು ಗಿರೀಶ್ ಕಾಸರವಳ್ಳಿ
ಅನನ್ಯ ಮತ್ತು ಗಿರೀಶ್ ಕಾಸರವಳ್ಳಿ

ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ನಿರ್ದೇಶನಕ್ಕೆ ಇಳಿದಿದ್ದಾರೆ. ಯಕ್ಷಗಾನ ಸ್ತ್ರೀ ಪಾತ್ರಧಾರಿ ಕಥಾ ಹಂದರವುಳ್ಳ 'ಹರಿಕಥಾ ಪ್ರಸಂಗ' ತನ್ನ ವ್ಯಕ್ತಿತ್ವ ಮತ್ತು ಸ್ವೀಕೃತಿಯನ್ನು ಹುಡುಕುವ ಕಥೆಯಂತೆ.

"ಸಿನೆಮಾ ನಿರ್ದೇಶನ ಧಿಡೀರ್ ನಿರ್ಧಾರ. ನನ್ನ ತಂದೆ ಮತ್ತು ಸಹೋದರ, ಸ್ಕ್ರಿಪ್ಟ್ ಲೇಖಕ ಗೋಪಾಲಕೃಷ್ಣ ಪೈ ಅವರೊಂದಿಗೆ ಮಾತುಕತೆ ನಡೆಸಿದ್ದರು. ನಾನು ಕೂಡ ಜೊತೆಗೆ ಸೇರಿಕೊಂಡೆ. ಎಲ್ಲರೂ ಕಥೆ ಇಷ್ಟ ಪಟ್ಟರು ಆಗ ಈ ಯೋಜನೆಯನ್ನು ಯಾರು ನಿರ್ದೇಶಿಸಬೇಕು ಎಂಬ ಸ್ಪರ್ಧೆ ಬಂತು. ಅಂಕಲ್ ಪೈ ನನಗೆ ಆಶೀರ್ವಾದ ಮಾಡಿದರು" ಎಂದು ವಿವರಿಸುತ್ತಾರೆ ಅನನ್ಯ.

ಅವರ ತಂದೆಯ ಮತ್ತು ಸಹೋದರನ ಸಿನೆಮಾಗಳಿಂದ ಸ್ಫೂರ್ತಿ ಪಡೆದಿದ್ದೇನೆ ಎನ್ನುವ ಅನನ್ಯ ಅವರ ಹೆಸರನ್ನು ಹೊತ್ತಿರುವುದರ ಬಗ್ಗೆ ಎಚ್ಚರಿಕೆ ಇದೆ ಎಂದು ಕೂಡ ತಿಳಿಸುತ್ತಾರೆ.

ಅನನ್ಯ ಈ ಹಿಂದೆ ಕೆಲವು ಸಿನೆಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಂದೆಯ ಸಿನೆಮಾಗಳಿಗೆ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿರುವುದಲ್ಲದೆ ಶಾರ್ಟ್ ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ.

ಬಸಂತ್ ಕುಮಾರ್ ಪಾಟಿಲ್ ಈ ಸಿನೆಮಾದ ನಿರ್ಮಾಪಕರಾಗಿದ್ದು, ಬೈಂದೂರು, ಕುಂದಾಪುರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಂಪಾ ಶೆಟ್ಟಿ, ಕೆ ಜಿ ಕೃಷ್ಣಮೂರ್ತಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com