ಅನೂಪ್ ಸಿನೆಮಾದಲ್ಲಿ ಮಿ.ಪಚಬಾಳೆ ಬಾಳೆಹಣ್ಣು ಪಾತ್ರ

ಸಹೋದರ ನಿರೂಪ್ ಬಂಢಾರಿ ಅವರ ಹುಟ್ಟುಹಬ್ಬದ ದಿನ ನಿರ್ದೇಶಕ ಅನೂಪ್ ಬಂಢಾರಿ ತಮ್ಮ ಹೊಸ ಚಿತ್ರ 'ರಾಜರಥ'ದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಿರೂಪ್ ಈ ಸಿನೆಮಾದ...
'ರಾಜರಥ'ದಲ್ಲಿ ನಿರೂಪ್ ಬಂಢಾರಿ
'ರಾಜರಥ'ದಲ್ಲಿ ನಿರೂಪ್ ಬಂಢಾರಿ
Updated on
ಬೆಂಗಳೂರು: ಸಹೋದರ ನಿರೂಪ್ ಬಂಢಾರಿ ಅವರ ಹುಟ್ಟುಹಬ್ಬದ ದಿನ ನಿರ್ದೇಶಕ ಅನೂಪ್ ಬಂಢಾರಿ ತಮ್ಮ ಹೊಸ ಚಿತ್ರ 'ರಾಜರಥ'ದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಿರೂಪ್ ಈ ಸಿನೆಮಾದ ನಾಯಕ ನಟ. 
ಅವಂತಿಕಾ ಶೆಟ್ಟಿ ಮತ್ತು ರವಿಶಂಕರ್ ಕೂಡ ನಟಿಸುತ್ತಿರುವ ಈ ಸಿನೆಮಾದಲ್ಲಿ ಅನೂಪ್ ಬಾಳೆಹಣ್ಣಿನ ಹೊಸ ಪಾತ್ರವೊಂದನ್ನು ಕೂಡ ಸೃಷ್ಟಿಸಿದ್ದಾರೆ. ಸಿನೆಮಾದಲ್ಲಿ ಇದು ಮುಖ್ಯ ಪಾತ್ರವಾಗಿ ಕಾಣಿಸಿಕೊಳ್ಳಲಿದ್ದು, ಅದರ ಹೆಸರ ಮಿ.ಪಚ್ಬಾಳೆ.
ಮಿ.ಪಚ್ಬಾಳೆ ಬಗ್ಗೆ ಹೆಚ್ಚು ಗುಟ್ಟು ಬಿಚ್ಚಿಡದ ನಿರೂಪ್ "ಈ ಹಣ್ಣನ್ನು ಚಾರ್ಲಿ ಚಾಪ್ಲಿನ್ ಸಿನೆಮಾದಿಂದ ಹಿಡಿದು ಹಲವಾರು ಸಿನಿಮಾಗಲ್ಲಿ ಬಳಸಿದ್ದಾರೆ" ಎನ್ನುವ ಅವರು ಉದಾಹರಣೆಗೆ ಚಾರ್ಲಿ ಚಾಪ್ಲಿನ್ ಸಿನೆಮಾಗಳ ಹಲವು ಸಿನೆಮಾಗಳಲ್ಲಿ ಅವರು ಬಾಳೆ ಹಣ್ಣಿನ ಸಿಪ್ಪೆ ಸುಲಿಯುವುದನ್ನು ಹಲವಾರು ಬಾರಿ ನೋಡಿರುತ್ತೀರಿ "ನಮ್ಮ ಸಿನೆಮಾ ಮಾಡುವಾಗ ಕೂಡ ಈ ಪಾತ್ರ ಒಳಗೊಳ್ಳುವ ಐಡಿಯಾ ಬಂದದ್ದು. ಬಹಳ ಆಸಕ್ತಿದಾಯಕವಾಗಿತ್ತು" ಎನ್ನುತ್ತಾರೆ ನಿರೂಪ್. "ಅಲ್ಲದೆ ಹಣ್ಣಿನ ಜೊತೆಗೆ ಹಳದಿ ಬಣ್ಣ ಕೂಡ ನಮ್ಮ ಸಿನೆಮಾದಲ್ಲಿ ಪ್ರಮುಖ" ಎನ್ನುತ್ತಾರೆ. 
ಒಂದು ವರ್ಷದವರೆಗೆ ಪ್ರದರ್ಶನ ಕಂಡ 'ರಂಗಿತರಂಗ'ದ ನಂತರ ಮತ್ತೆ ಈ ಸಹೋದರರು ಒಟ್ಟಾಗಿದ್ದಾರೆ. ಹಾರರ್ ಪ್ರಾಕಾರದಿಂದ ರೋಮ್ಯಾಂಟಿಕ್ ಹಾಸ್ಯ ಪ್ರಾಕಾರಕ್ಕೆ ಜಿಗಿದಿದ್ದಾರೆ. "'ರಾಜರಥ' ಒಂಭತ್ತು ದಿನಗಳ ಚಿತ್ರೀಕರಣ ಮುಗಿಸಿದೆ, ಈ ಸಮಯದಲ್ಲಿ ಎರಡು ಹಾಡುಗಳು ಮತ್ತು ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಮುಂದಿನ ಹಂತದ ಚಿತ್ರೀಕರಣ ಆಗಸ್ಟ್ 26 ರಿಂದ ಮುಂದುವರೆಯಲಿದೆ" ಎನ್ನುತ್ತಾರೆ ನಿರೂಪ್. 
ಈ ಸಿನೆಮಾಗೆ ವಿಲಿಯಂ ಡೇವಿಡ್ ಸಿನೆಮ್ಯಾಟೋಗ್ರಾಫರ್ ಮತ್ತು ಅನೂಪ್ ಅವರೇ ಸಂಗೀತ ನೀಡುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com