'ಮುಕುಂದ ಮುರಾರಿ' ಉಪೇಂದ್ರ-ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕಾತರ!

ನಿರ್ದೇಶಕ ನಂದಕಿಶೋರ್ ತಮ್ಮ ಮುಂದಿನ ಚಿತ್ರ 'ಮುಕುಂದ ಮುರಾರಿ'ಯೊಂದಿಗೆ ಹಲವು ವಿಶೇಷತೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ಸುದೀಪ್
ಸುದೀಪ್ ಮತ್ತು ಉಪೇಂದ್ರ
ಸುದೀಪ್ ಮತ್ತು ಉಪೇಂದ್ರ
ಬೆಂಗಳೂರು: ನಿರ್ದೇಶಕ ನಂದಕಿಶೋರ್ ತಮ್ಮ ಮುಂದಿನ ಚಿತ್ರ 'ಮುಕುಂದ ಮುರಾರಿ'ಯೊಂದಿಗೆ ಹಲವು ವಿಶೇಷತೆಗಳನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ನಟಿಸಿದ್ದಾರೆ. 
ಗಾಂಧಿನಗರದ್ಲಲಿ ಹರಿದಾಡುತ್ತಿರುವ ಇತ್ತೀಚಿನ ಸುದ್ದಿಯಂತೆ, ಸಿನೆಮಾದ ಆಡಿಯೋ ಮತ್ತು ಟೀಸರ್ ಸುದೀಪ್ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ ಹಾಗೂ ಉಪೇಂದ್ರ ಹುಟ್ಟುಹಬ್ಬವಾದ್ದ ಸೆಪ್ಟೆಂಬರ್ 18 ರ ಆಸುಪಾಸಿನಲ್ಲಿ ಸಿನೆಮಾ ಬಿಡುಗಡೆಯಾಗುವ ಮುನ್ಸೂಚನೆ ದೊರೆತಿದೆ.
ಆಡಿಯೋ ಮತ್ತು ಟೀಸರ್ ಬಿಡುಗಡೆ ಸಾರ್ವಜನಿಕ ಕಾರ್ಯಕ್ರಮವಾಗಲಿದ್ದು, ಮಧ್ಯರಾತ್ರಿಯಲ್ಲಿ  ಈ ಸ್ಟಾರ್ ಗಳ ಅಭಿಮಾನಿಗಳ ನಡುವೆ ಪಾದಾರ್ಪಣೆಗೊಳ್ಳಲಿವೆ ಎಂದು ತಿಳಿದುಬಂದಿದೆ. 
ಈ ಇಬ್ಬರು ಒಟ್ಟಿಗೆ ನಟಿಸಿರುವುದು ಮತ್ತು ಅವರ ಹುಟ್ಟುಹಬ್ಬ ಒಂದೇ ತಿಂಗಳಲ್ಲಿ ಬಿದ್ದಿರುವುದು ಈ ನಟರ ಅಭಿಮಾನಿಯುಗಳಿಗೆ ಡಬಲ್ ಧಮಾಕ. ಸಿನೆಮಾದ ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಿದ್ದು, ಡಬ್ಬಿಂಗ್ ಪ್ರಕ್ರಿಯೆ ಕೂಡ ಕೊನೆಯ ಹಂತದಲ್ಲಿದೆ ಎಂದು ತಿಳಿಸಿಯುತ್ತವೆ ಮೂಲಗಳು. 
ಇದು ಹಿಂದಿ ಸಿನೆಮಾ 'ಓ ಮೈ ಗಾಡ್' ನ ರಿಮೇಕ್. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸುಧಾಕರ್ ರಾಜ್ ಅವರ ಸಿನೆಮ್ಯಾಟೋಗ್ರಾಫಿ ಚಿತ್ರಕ್ಕಿದೆ. ನಿಖಿತಾ ತುಕ್ರಾಲ್ ನಾಯಕನಟಿಯಾಗಿದ್ದು, ರವಿಶಂಕರ್ ಮತ್ತು ಅವಿನಾಶ್ ಕೂಡ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com