ಚೆನ್ನೈ: ತಮಿಳುನಾಡು ಇಂದು ವೀರಪುತ್ರಿಯನ್ನು ಕಳೆದುಕೊಂಡಿದೆ ಎಂದು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಹೇಳಿದ್ದಾರೆ.
ಜಯಲಲಿತಾ ನಿಧನ ಹಿನ್ನೆಲೆ ಕುಟುಂಬ ಸಮೇತರಾಗಿ ಆಗಮಿಸಿದ ರಜನಿಕಾಂತ್ ಜಯಲಲಿತಾರ ಅಂತಿಮ ದರ್ಶನ ಪಡೆದರು. ಈ ವೇಳೆ ಭಾವುಕರಾದ ರಜನಿ, ಧೀಮಂತ ನಾಯಕಿಯ ಸಾವಿಗೆ ಕಂಬನಿ ಮಿಡಿದರು. ತಮಿಳುನಾಡು ಇಂದು ವೀರಪುತ್ರಿಯನ್ನು ಕಳೆದುಕೊಂಡಿದೆ ಎಂದು ಹೇಳಿದರು.
ಪತ್ನಿ ಲತ, ಪುತ್ರಿಯರಾದ ಸೌಂದರ್ಯ, ಐಶ್ವರ್ಯ ಅಳಿಯ ಧನುಷ್ ಜತೆ ಸೇರಿ ಬಂದ ರಜನಿಕಾಂತ್ ಜಯಲಲಿತಾರಿಗೆ ನಮಿಸಿ ಅಂತಿಮ ದರ್ಶನ ಪಡೆದರು. ಬಳಿಕ ಜಯಲಲಿತಾರ ಸ್ನೇಹಿತೆ ಶಶಿಕಲಾಗೆ ಸಾಂತ್ವನ ಹೇಳಿದರು.
Advertisement