ಪದ್ಮಾವತಿ ಚಿತ್ರ ಸೆಟ್ ನಲ್ಲಿ ಅವಘಡ: ವರ್ಣ ಚಿತ್ರಕಾರ ಸಾವು

ಇತ್ತೀಚೆಗೆ ಕನ್ನಡದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟಿರುವ ಘಟನೆ...
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
ನವದೆಹಲಿ: ಇತ್ತೀಚೆಗೆ ಕನ್ನಡದ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟಿರುವ ಘಟನೆ ನಡೆದಿತ್ತು. ಇದೀಗ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರದ ಚಿತ್ರೀಕರಣ ಸೆಟ್ ನಲ್ಲಿ ಕೂಡ ಅಂತಹದೇ ಅವಘಡ ಸಂಭವಿಸಿದೆ.
34 ವರ್ಷದ ವರ್ಣ ಚಿತ್ರಕಾರ ಮುಕೇಶ್ ದಾಕಿಯಾ ಚಿತ್ರಕ್ಕಾಗಿ ಸಮಾಧಿ ಕಟ್ಟುವ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ 5 ಅಡಿ ಎತ್ತರದಿಂದ ಬಿದ್ದರು. ಆಗ ಅವರ ಬೆನ್ನು ಮತ್ತು ತಲೆಗೆ ಭಾರೀ ಏಟು ಬಿದ್ದಿತು. ಕೂಡಲೇ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
 ಆರೆ ಕಾಲೊನಿಯ ಮೊರಚ ಪಾಡಾದ ನಿವಾಸಿಯಾಗಿರುವ ಮುಕೇಶ್ ದಾಕಿಯಾ 5 ಅಡಿ ಎತ್ತರದಿಂದ ಬಿದ್ದಾಗ ತಲೆಗೆ ತೀವ್ರ ಏಟು ಬಿದ್ದಿದೆ. ಪೊಲೀಸರು ಆಕಸ್ಮಿಕ ಮರಣ ವರದಿಯನ್ನು ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.
ಸಮಾಧಿ ಕಟ್ಟುವ ಕೆಲಸ ಬಹುತೇಕ ಮುಗಿದಿತ್ತು. ಅಂತಿಮವಾಗಿ ಸಮಾಧಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿತ್ತು ಎಂದು ಬನ್ಸಾಲಿ ಪ್ರೊಡಕ್ಷನ್ಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೋಭಾ ಸಂತ್ ತಿಳಿಸಿದ್ದಾರೆ. 
ನಾವು ಆಕಸ್ಮಿಕ ಅವಘಡದ ಕೇಸು ದಾಖಲಿಸಿಕೊಂಡಿದ್ದೇವೆ. ಅಷ್ಟು ಎತ್ತರದಿಂದ ಅವರು ಹೇಗೆ ಬಿದ್ದರು. ಈ ವಿಷಯದಲ್ಲಿ ಏನಾದರೂ ಬೇಜವಾಬ್ದಾರಿ ಮತ್ತು ಅಜಾಗರೂಕತೆ ತೋರಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ದೀಪಿಕಾ ಪಡುಕೋಣೆ ಸಂತಾಪ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com