ಸುಳ್ಳು ಸಾವಿನ ಸುದ್ದಿ: ನಟ ಸೆಂಥಿಲ್ ರಿಂದ ದೂರು ದಾಖಲು

ತಾನು ಸತ್ತನೆಂದು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನನ್ನ ಮನಸ್ಸಿಗೆ ಭಾರೀ ನೋವುಂಟಾಗಿದೆ ಎಂದು ತಮಿಳು ನಟ..
ಸೆಂಥಿಲ್ ಕುಮಾರ್
ಸೆಂಥಿಲ್ ಕುಮಾರ್

ಮಧುರೈ: ತಾನು ಸತ್ತನೆಂದು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನನ್ನ ಮನಸ್ಸಿಗೆ ಭಾರೀ ನೋವುಂಟಾಗಿದೆ ಎಂದು ತಮಿಳು ನಟ ಆರ್ ಸೆಂಥಿಲ್ ಹೇಳಿದ್ದಾರೆ.

ಈ ಸಂಬಂಧ ಪೊಲೀಸ್ ಕಮಿಷನರ್ ಗೆ ದೂರು ದಾಖಲಿಸಿದ ಅವರು ಈ ರೀತಿಯ ಸುದ್ದಿಗಳನ್ನು ಹರಿಯಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ರೀತಿ ವಾಟ್ಸಾಪ್ ನಲ್ಲಿ ಮೆಸೇಜ್ ಹರಿದಾಡಿದ್ದು, ಹಲವು ಮಂದಿ ತಮ್ಮನ್ನು ಸಂಪರ್ಕಿಸಿ ಸತ್ಯ ಏನು ಎಂಬುದನ್ನು ತಿಳಿದುಕೊಂಡರು ಎಂದು ಹೇಳಿದರು. ತಮ್ಮ ವಿಭಿನ್ನ ದೈಹಿಕ ಭಾಷಾ ಶೈಲಿ ಹಾಗೂ ಪಂಚಿಂಗ್ ಡೈಲಾಗ್​ಗಳಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಜನಪ್ರಿಯ ಸೆಂಥಿಲ್ 500ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com