ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ: ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದ ರಾಹುಲ್ ರಾಜ್ ಸಿಂಗ್?

ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ....
ಪ್ರತ್ಯೂಷಾ ಬ್ಯಾನರ್ಜಿ ಮತ್ತು ರಾಹುಲ್ ರಾಜ್ ಸಿಂಗ್
ಪ್ರತ್ಯೂಷಾ ಬ್ಯಾನರ್ಜಿ ಮತ್ತು ರಾಹುಲ್ ರಾಜ್ ಸಿಂಗ್
Updated on

ಮುಂಬಯಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

ಆತ್ಮಹತ್ಯೆಗೂ ಮುನ್ನ ತನ್ನ ಗೆಳೆಯ ರಾಹುಲ್ ರಾಜ್ ಸಿಂಗ್ ಜೊತೆ  ಪ್ರತ್ಯೂಷಾ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದಳು. ಮೂರು ನಿಮಿಷಗಳ ಸಂಭಾಷಣೆಯಲ್ಲಿ, ಉದ್ಯಮಿಯೊಬ್ಬನ ಜೊತೆ ತಾನು ಹಾಸಿಗೆ ಹಂಚಿಕೊಂಡಿದ್ದ ವಿಷಯದ ಬಗ್ಗೆ ಪ್ರತ್ಯೂಷಾ ಮಾತನಾಡಿದ್ದಳು.

ನಾನು ಇಲ್ಲಿಗೆ ನಟಿಸಲು ಬಂದೆ, ಆದರೆ ನೀನು ನನ್ನನ್ನು ಇಲ್ಲಿಗೆ ಕರೆದು ತಂದು ನಿಲ್ಲಿಸಿದ್ದೀಯಾ, ನಿನಗೆ ಗೊತ್ತಿಲ್ಲ, ಇಂದು ನಾನು ಎಷ್ಟು ನೋವು ಅನುಭವಿಸುತ್ತಿದ್ದೇನೆ, ಎಂಥ ಕೆಟ್ಟ ಭಾವನೆ ನನಗೆ ಮೂಡುತ್ತಿದೆ ಎಂದು ನಿನಗೆ ತಿಳಿದಿಲ್ಲ, ಎಂದು ಹೇಳಿ ಫೋನ್ ಕಟ್ ಮಾಡಿದ್ದಾಳೆ. ಈ ಸಂಭಾಷಣೆ ಪ್ರತಿ ಪ್ರತ್ಯೂಷಾ ಪೋಷಕರ ಪರ ವಕೀಲ ನೀರಜ್ ಗುಪ್ತಾ ಅವರಿಗೆ ಸಿಕ್ಕಿದೆ ಎಂದು ವರದಿಯಾಗಿದೆ.

ಈ ಮಾತುಗಳಿಂದ ರಾಹುಲ್ ರಾಜ್ ಸಿಂಗ್ ಆಕೆಯನ್ನು ವೇಶ್ಯಾವಾಟಿಕೆಗೆ ನಡೆಸಲು ಒತ್ತಾಯಿಸುತ್ತಿದ್ದ ಎಂಬುದಕ್ಕೆ ಪುಷ್ಠಿ ನೀಡುತ್ತವೆ, ಎಂದು ಅವರು ಹೇಳಿದ್ದಾರೆ. ಈ ವರ್ಷದ ಏಪ್ರಿಲ್ 1 ರಂದು ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆಗೆ ಶರಣಾಗಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com