ಪರಮಾಪ್ತರಿಗೆ ಮಾತ್ರ ಯಶ್-ರಾಧಿಕಾ ಪಂಡಿತ್‌ರ ವಿಶೇಷ ಮದುವೆಯ ಮಮತೆಯ ಕರೆಯೋಲೆ

ಮದುವೆಗೆ ಅಣಿಯಾಗಿರುವ ಯಶ್-ರಾಧಿಕಾ ಪಂಡಿತ್ ಜೊಡಿ ಮದುವೆಯ ಮಮತೆಯ ಕರೆಯೋಲೆಯನ್ನು ಹಂಚಲು ಶುರು ಮಾಡಿದ್ದು ಈ ಮಧ್ಯೆ ತಮ್ಮ ಪರಮಾಪ್ತರಿಗೆ ಅಂತಾನೇ...
ಯಶ್-ರಾಧಿಕಾ ಪಂಡಿತ್
ಯಶ್-ರಾಧಿಕಾ ಪಂಡಿತ್

ಮದುವೆಗೆ ಅಣಿಯಾಗಿರುವ ಯಶ್-ರಾಧಿಕಾ ಪಂಡಿತ್ ಜೊಡಿ ಮದುವೆಯ ಮಮತೆಯ ಕರೆಯೋಲೆಯನ್ನು ಹಂಚಲು ಶುರು ಮಾಡಿದ್ದು ಈ ಮಧ್ಯೆ ತಮ್ಮ ಪರಮಾಪ್ತರಿಗೆ ಅಂತಾನೇ ಯಶ್ ವಿಶೇಷ ಆಮಂತ್ರಣ ಪತ್ರಿಕೆಯೊಂದನ್ನು ತಯಾರಿಸಿದ್ದು ಕೆಲವರಿಗೆ ಮಾತ್ರ ಈ ಆಮಂತ್ರಣ ಪತ್ರಿಕೆ ಸಿಗಲಿದೆ.

ಕುಟುಂಬಸ್ಥರು ಮಾಡಿರುವ ಆಮಂತ್ರಣ ಪತ್ರದ ಜತೆಗೆ ಯಶ್-ರಾಧಿಕಾ ತಮ್ಮ ಪರಮಾಪ್ತರಿಗಾಗಿ ವಿಶೇಷವಾಗಿ ಮುದ್ದಾದ ಕವನ-ಆಮಂತ್ರಣ ಸಿದ್ಧಪಡಿಸಿದ್ದಾರೆ. ಇದನ್ನು ನಿರ್ದೇಶಕ ಎಪಿ ಅರ್ಜುನ್ ಬರೆದಿದ್ದಾರೆ.

ಅರ್ಜುನ್ ಬರೆದಿರುವ ಪ್ರೇಮಕಾವ್ಯ ಯಶ್ ಮತ್ತು ರಾಧಿಕಾಗೆ ಬಹಳ ಅಚ್ಚುಮೆಚ್ಚಾಗಿದ್ದು ಈ ಆಮಂತ್ರಣ ಕೆಲವೇ ಪರಮಾಪ್ತರಿಗೆ ಮಾತ್ರ ಕೊಡಲಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com