ಬೆಂಗಳೂರು: ದಿವಂಗತ ವಿಷ್ಣುವರ್ಧನ್ ನಿಧನ ನಂತರ ತ್ರಿಡಿ ಎಫೆಕ್ಟ್ ಮೂಲಕ ಮತ್ತೆ ತೆರೆ ಮೇಲೆ ವಿಷ್ಣುರನ್ನು ತೋರಿಸುವ ಪ್ರಯತ್ನ ಮಾಡುತ್ತಿರುವ ನಾಗರ ಹಾವು ಚಿತ್ರವನ್ನು ಸೂಪರ್ ಸ್ಟಾರ್ ರಜನೀಕಾಂತ್ ವೀಕ್ಷಿಸಲಿದ್ದಾರೆ.
ತನ್ನ ಸ್ನೇಹಿತನನ್ನು ತ್ರಿಡಿ ಎಫೆಕ್ಟ್ ನಲ್ಲಿ ಮತ್ತೆ ತೆರೆ ಮೇಲೆ ನೋಡಲು ರಜನಿ ಚೆನ್ನೈಗೆ ತೆರಳಲಿದ್ದಾರೆ. ರಜನಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಎರಡು ವರ್ಷಗಳ ನಂತರ ನಾಗರಹಾವು ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ರೀ ಎಂಟ್ರಿ ನೀಡಿರುವ ರಮ್ಯಾ ಸಿನಿಮಾದಲ್ಲಿ ನಾಗಕನ್ನಿಕೆಯಾಗಿ ಕಾಣಿಸಲಿದ್ದಾರೆ.
ಇನ್ನೂ ನಾಗರಹಾವು ಚಿತ್ರ ತಮಿಳು, ತೆಲುಗೂ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಶಿವನಾಗಮ್ ಮತ್ತು ತೆಲುಗಿನಲ್ಲಿ ನಾಗಭರಣಂ ಎಂಬ ಶೀರ್ಷಿಕೆಯಲ್ಲಿ ನಾಳೆ ಶುಕ್ರವಾರ ಬಿಡುಗಡೆಯಾಗಲಿದೆ.
ವಿಷ್ಣುವರ್ಧನ್ ಅವರನ್ನು ತೆರೆಯ ಮೇಲೆ ಗ್ರಾಫಿಕ್ ನಲ್ಲಿ ತರಲ ಸುಮಾರು 15 ಕೋಟಿ ರು ವೆಚ್ಚ ಮಾಡಲಾಗಿದೆ.
Advertisement