ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸುದೀಪ್ "ಕೃಷ್ಣನ ಪಾತ್ರ ಮಾಡುವುದಕ್ಕೆ ಬಹಳ ಉತ್ಸುಕನಾಗಿದ್ದೆ. ಅದರಲ್ಲೂ ಉಪ್ಪಿ ಅವರ ಜೊತೆಗೆ ನಟಿಸುವುದಕ್ಕೆ. ನಂತರ ಆ ಧಿರಿಸು ಧರಿಸಿದ ಮೇಲಂತೂ ಆ ಪಾತ್ರ ಆಪ್ತವಾಯಿತು. ಈ ಪಾತ್ರದೊಂದಿಗೆ ಕೆಲವು ಸವಾಲುಗಳನ್ನು ಎದುರಿಸಬೇಕಾಯಿತು ಏಕೆಂದರೆ ದೇವರ ವರ್ತನೆ ನನಗೆ ತಿಳಿಯದು. ನಾನು ಪ್ರತಿಕ್ರಿಯಿಸದ ಮತ್ತು ಸುಮ್ಮನಿರುವ ದೇವರುಗಳನ್ನು ನೋಡಿದ್ದೇನೆ. ನಾವು ದೇವಾಲಯಕ್ಕೆ ಹೋಗಿ, ಅತ್ತರೂ, ಕರೆದರೂ, ಪೂಜೆ ಮಾಡಿದರೂ ಏನು ಪ್ರತಿಕ್ರಿಯಿಸದೆ ಪ್ರತಿಮೆಯಾಗಿಯೇ ಉಳಿಯುತ್ತಾನೆ ಅವನು. ನನಗೆ ಹೇಗೆ ಪ್ರತಿಕ್ರಿಯಸಬೇಕು ಎಂಬುದೇ ತಿಳಿದಿರಲಿಲ್ಲ. ಹಲವು ಸಂಭಾಷಣೆಯನ್ನು ಕೂಡ ಉಲಿಯಬೇಕಿತ್ತು ಕೊನೆಗೆ ಹೇಗೋ ನಿಭಾಯಿಸಿದೆ" ಎನ್ನುತ್ತಾರೆ.