ದುನಿಯ ವಿಜಯ್
ದುನಿಯ ವಿಜಯ್

ಕಾಡಾನೆ ಸಿದ್ಧನ ಆರೋಗ್ಯ ವಿಚಾರಿಸಿದ ದುನಿಯಾ ವಿಜಯ್, ಪತ್ನಿ ಕೀರ್ತಿಗೌಡ

ನಟ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಕಾಡಾನೆ ಸಿದ್ಧನ ಆರೋಗ್ಯವನ್ನು ವಿಚಾರಿಸಿದರು...
ರಾಮನಗರ: ನಟ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಕಾಡಾನೆ ಸಿದ್ಧನ ಆರೋಗ್ಯವನ್ನು ವಿಚಾರಿಸಿದರು. 
ಕಾಲು ಮುರಿದುಕೊಂಡು ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಸಿದ್ಧನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬನ್ನೇರುಘಟ್ಟದ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಇಂದು ಸಿದ್ಧನ ಆರೋಗ್ಯ ವಿಚಾರಿಸಿದ ವಿಜಯ್ ಬಳಿಕ ಸಿದ್ಧನಿಗೆ ಚಿಕಿತ್ಸೆ ನೀಡಿ. ಆದರೆ ದಯಾಮರಣ ಮಾತ್ರ ಕೊಡಬೇಡಿ ಎಂದು ಹೇಳಿದ್ದಾರೆ. 
ಕಾಲು ಮುರಿದುಕೊಂಡು ಕಳೆದ ಒಂದೂರವೆ ತಿಂಗಳಿನಿಂದ ಯಮಯಾತನೆ ಅನುಭವಿಸುತ್ತಿದ್ದ ಕಾಡನೆ ಸಿದ್ಧನಿಗೆ ಕಳೆದ ವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸಂಪೂರ್ಣವಾಗಿ ನಿತ್ರಾಣಗೊಂಡಿರುವ ಆನೆಗೆ ಸತತವಾಗಿ ಚಿಕಿತ್ಸೆ ನೀಡುತ್ತಿದ್ದರು ಆರೋಗ್ಯದಲ್ಲಿ ಚೇತರಿಕೆ ಮಾತ್ರ ಕಂಡುಬಂದಿಲ್ಲ. 

Related Stories

No stories found.

Advertisement

X
Kannada Prabha
www.kannadaprabha.com