ಕನ್ನಡಿಗನ ಚಿತ್ರಕ್ಕೆ ಮೆಚ್ಚುಗೆ: ರಾಜಮೌಳಿ 'ದೇವರ ಮಗು' ಎಂದ ರಜನಿಕಾಂತ್

ಮೂಲತಃ ಕನ್ನಡಿಗನೇ ಆಗಿದ್ದರೂ ಟಾಲಿವುಡ್ ನಲ್ಲಿ ಹೆಸರಾಂತ ನಿರ್ದೇಶನಾಗಿರುವ ಎಸ್ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ...
ಸೂಪರ್ ಸ್ಟಾರ್ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್
Updated on
ನವದೆಹಲಿ: ಮೂಲತಃ ಕನ್ನಡಿಗನೇ ಆಗಿದ್ದರೂ ಟಾಲಿವುಡ್ ನಲ್ಲಿ ಹೆಸರಾಂತ ನಿರ್ದೇಶನಾಗಿರುವ ಎಸ್ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2'ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ದೇಶದಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಿರುವ ಬಾಹುಬಲಿ-2 ದಿ ಕನ್ ಕ್ಲ್ಯೂಷನ್ ಚಿತ್ರಕ್ಕೆ ರಜನಿಕಾಂತ್ ಅವರು ಮಾರುಹೋಗಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಾಹುಬಲಿ-2 ಚಿತ್ರವನ್ನು ಕೊಂಡಾಡಿದ್ದಾರೆ. 
ಬಾಹುಬಲಿ-2 ಸಿನಿಮಾ ಭಾರತದ ಚಿತ್ರಲೋಕಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ. ನಿರ್ದೇಶಖ ಎಸ್ಎಸ್ ರಾಜಮೌಳಿ ದೇವರು ಕೊಟ್ಟ ಮಗುವಾಗಿದ್ದು, ರಾಜಮೌಳಿ ಮತ್ತು ಅವರ ತಂಡಕ್ಕೆ ಸಲ್ಯೂಟ್ ಎಂದು ಹೇಳಿದ್ದಾರೆ.
  ರಜನಿಕಾಂತ್ ಅವರ ಈ ಪ್ರತಿಕ್ರಿಯೆ ರಾಜಮೌಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಲೈವಾ...ದೇವರೆಂದು ಪರಿಗಣಿಸುವವರೇ ನಮ್ಮನ್ನು ಆಶೀರ್ವದಿಸಿದ್ದಾರೆ. ಇದಕ್ಕಿಂದ ದೊಡ್ಡದು ಬೇರಿಲ್ಲ ಎಂದು ನಮಸ್ಕರಿಸಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ದಗ್ಗುಬಾಟಿ ರಾಣಾ ಕೂಡ ರಜನಿಕಾಂತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com