ಭೀಮಾ ಸೇನಾ ನಳ ಮಹಾರಾಜನಿಗಾಗಿ ಅಡುಗೆ ಕೌಶಲ್ಯ ಕಲಿತ ಅರವಿಂದ್ ಅಯ್ಯರ್

ವರಮಹಾಲಕ್ಷ್ಮಿ ವ್ರತ ದಿನದಂದು ಭೀಮಾ ಸೇನಾ ನಳ ಮಹಾರಾಜ ಚಿತ್ರ ಲಾಂಚ್ ಆಗಿದ್ದು ಚಿತ್ರವನ್ನು ಕಾರ್ತಿಕ್ ಸರಗೂರ್ ನಿರ್ದೇಶಿಸುತ್ತಿದ್ದಾರೆ.
ಅರವಿಂದ್ ಅಯ್ಯರ್
ಅರವಿಂದ್ ಅಯ್ಯರ್
ವರಮಹಾಲಕ್ಷ್ಮಿ ವ್ರತ ದಿನದಂದು ಭೀಮಾ ಸೇನಾ ನಳ ಮಹಾರಾಜ ಚಿತ್ರ ಲಾಂಚ್ ಆಗಿದ್ದು ಚಿತ್ರವನ್ನು ಕಾರ್ತಿಕ್ ಸರಗೂರ್ ನಿರ್ದೇಶಿಸುತ್ತಿದ್ದಾರೆ. 
ಚಿತ್ರದಲ್ಲಿ ಅರವಿಂದ್ ಅಯ್ಯರ್ ನಾಯಕನಾಗಿ ನಟಿಸುತ್ತಿದ್ದು ಅದಕ್ಕೆ ಅಡುಗೆ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅರವಿಂದ್ ಅಯ್ಯರ್ ಅಡುಗೆ ಕೋಣೆಯಲ್ಲಿ ಅಭ್ಯಾಸದಲ್ಲಿ ತೊಡಗಿದ್ದು ತರಕಾರಿಗಳನ್ನು ಕತ್ತರಿಸುವ ಕೌಶಲ್ಯಗಳನ್ನು ಕಲೆಯುತ್ತಿದ್ದಾರೆ. ಅರವಿಂದ್ ಅಯ್ಯರ್ ಗೆ ಆರೋಹಿ ನಾರಾಯಣ್ ಜತೆಯಾಗಲಿದ್ದಾರೆ.
ಇದೇ ತಿಂಗಳ ಅಂತ್ಯದಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿ. ಚಿತ್ರವನ್ನು ಜಂಟಿಯಾಗಿ ನಟ ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ಮತ್ತು ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ನಿರ್ಮಿಸುತ್ತಿದ್ದಾರೆ. 
ಚಿತ್ರದಲ್ಲಿ ಪ್ರಿಯಾಂಕ, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್ ಮತ್ತು ಆಧ್ಯ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ್ ಸಂಯೋಜಿಸುತ್ತಿದ್ದು ರವೀಂದ್ರನಾಥ್ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com