ರಾಜರಥದ ಮೂಲಕ ಕನ್ನಡಕ್ಕೆ ತಮಿಳು ನಟ ಆರ್ಯ ಎಂಟ್ರಿ

ರಂಗೀತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಅವರ ಮುಂದಿನ ರಾಜರಥ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಆರ್ಯ ಅಭಿನಯಿಸುತ್ತಿದ್ದು ಆ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ...
ನಿರೂಪ್ ಭಂಡಾರಿ, ಆರ್ಯ, ಅನೂಪ್ ಭಂಡಾರಿ
ನಿರೂಪ್ ಭಂಡಾರಿ, ಆರ್ಯ, ಅನೂಪ್ ಭಂಡಾರಿ
Updated on
ರಂಗೀತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಅವರ ಮುಂದಿನ ರಾಜರಥ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಆರ್ಯ ಅಭಿನಯಿಸುತ್ತಿದ್ದು ಆ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. 
ರಾಜರಥ ಚಿತ್ರದಲ್ಲಿ ಆರ್ಯ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಆರ್ಯ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಚಿತ್ರದಲ್ಲಿನ ಆರ್ಯ ಅವರ ಪಾತ್ರದ ಕುರಿತ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. 
ಮೈಸೂರಿನಲ್ಲಿ ಬಿಡುಬಿಟ್ಟಿರುವ ಚಿತ್ರ ತಂಡ ಚಿತ್ರೀಕರಣದಲ್ಲಿ ತೊಡಗಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ ರಾಜರಥ ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರಕ್ಕಾಗಿ ಖ್ಯಾತ ನಟನನ್ನು ಹುಡುಕುತ್ತಿದ್ದೇವು ಅದರಂತೆ ನಮಗೆ ತಮಿಳಿನ ನಟ ಆರ್ಯ ಆ ಪಾತ್ರಕ್ಕೆ ಸೂಕ್ತ ಎಂದೆನಿಸಿತು. ಈ ಕುರಿತು ಆರ್ಯವನ್ನು ಸಂಪರ್ಕಿಸಿದ್ದು ಅವರು ಈ ಪಾತ್ರವನ್ನು ಮಾಡಲು ಒಪ್ಪಿಕೊಂಡರು ಎಂದು ಹೇಳಿದ್ದಾರೆ. 
ರಾಜರಥ ಚಿತ್ರದಲ್ಲಿ ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್ ಮುಂತಾದವರು ನಟಿಸುತ್ತಿದ್ದು ಚಿತ್ರಕ್ಕೆ ಅನೂಪ್ ಭಂಡಾರಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಜಯ್ ರೆಡ್ಡಿ, ಅಂಜು ವಲ್ಲಭ್, ವಿಷ್ಟು ಡಾಕಪ್ಪಗಿರಿ ಮತ್ತು ಸತೀಶ್ ಶಾಸ್ತ್ರಿ ಎಂಬುವರು ಬಂಡವಾಳ ಹೂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com