ಸ್ಯಾಂಡಲ್‏ವುಡ್ ಪ್ರಾಜೆಕ್ಟ್ ಗಳಿಗೆ ಸುದೀಪ್ ಆದ್ಯತೆ, ಬೇರೆ ಭಾಷೆಗೆ ಅನಂತರ!

ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸುದೀಪ್ ಇದೀಗ ಮತ್ತೊಮ್ಮೆ ಗಡಿದಾಟಿ ಬಾಲಿವುಡ್ ಮತ್ತು ಇತರ .....
ನಟ ಸುದೀಪ್
ನಟ ಸುದೀಪ್
Updated on
ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸುದೀಪ್ ಇದೀಗ ಮತ್ತೊಮ್ಮೆ ಗಡಿದಾಟಿ ಬಾಲಿವುಡ್ ಮತ್ತು ಇತರ ದಕ್ಷಿಣ ಭಾರತ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರ ನಿರ್ಮಾಪಕರಿಂದ ಸುದೀಪ್ ಗೆ ಅವಕಾಶಗಳು ಬರುತ್ತಿದ್ದು, ಸದ್ಯದ ಮಟ್ಟಿಗೆ ತೆಲುಗಿನಲ್ಲಿ ಚಿರಂಜೀವಿಯವರ 151ನೇ ಚಿತ್ರ ಉಯ್ಯಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡಿದ್ದಾರೆ.
ಬಹುಭಾಷಾ ಚಿತ್ರದಲ್ಲಿ ನಟಿಸಲು ಕೂಡ ಸುದೀಪ್ ರನ್ನು ಚಿತ್ರ ನಿರ್ಮಾಪಕರು ಸಂಪರ್ಕಿಸಿದ್ದಾರೆ. ಮಹಾಭಾರತ ಕಥೆಯನ್ನಾಧರಿಸಿದ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ವಿಕ್ರಮ್ ಕೂಡ ಇರಲಿದ್ದಾರೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯವರ ಕಡೆಯಿಂದ ಸುದೀಪ್ ಗೆ ಈ ಅವಕಾಶ ಬಂದಿದೆಯಂತೆ. ಚಿತ್ರದ ಕುರಿತು ಮಾತುಕತೆ ನಡೆಯುತ್ತಿದ್ದು ಸುದೀಪ್ ಕಡೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲವಂತೆ.
ಇದಕ್ಕೆ ಕಾರಣ ಮುಂದಿನ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುವ ಮೊದಲು ಸುದೀಪ್ ಅವರು ಕನ್ನಡದಲ್ಲಿ ಈಗಾಗಲೇ ಒಪ್ಪಿಕೊಂಡು ಸಹಿ ಹಾಕಿರುವ ಕೆಲಸಗಳನ್ನು ಮುಗಿಸಬೇಕಿದೆ. 
ಸದ್ಯದ ಮಟ್ಟಿಗೆ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ತೆಲುಗುನಲ್ಲಿ ಚಿರಂಜೀವಿ ಚಿತ್ರ ಹಾಗೂ ಹಾಲಿವುಡ್ ನಲ್ಲಿ ರೈಸನ್ ಚಿತ್ರಕ್ಕೆ ಮಾತ್ರ ಸಹಿ ಹಾಕಿದ್ದಾರೆ.
ಸುದೀಪ್ ಅವರು ಸದ್ಯ ಪ್ರೇಮ್ ಅವರ ವಿಲನ್ ಚಿತ್ರದಲ್ಲಿ ನಟಿಸುತ್ತಿದ್ದು, ನಂತರ ಎಸ್.ಕೃಷ್ಣ ಅವರ ಪೈಲ್ವಾನ್ ಮತ್ತು ಸೂರಪ್ಪ ಬಾಬು ಅವರ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸಲಿದ್ದಾರೆ. ಅದರ ಮಧ್ಯೆ ಅಂಬರೀಷ್ ಜೊತೆಗೆ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದಲ್ಲಿ ನಟಿಸಲಿದ್ದು ಅದನ್ನು ತಮ್ಮ ಕಿಚ್ಚ ಬ್ಯಾನರ್ ನಡಿಯಲ್ಲಿಯೇ ತಯಾರಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com