ಅಯೋಗ್ಯ ತಂಡದ ಸದಸ್ಯರ ಮನ ಗೆದ್ದಿರುವ ಬೈರ

ಅಯೋಗ್ಯ ಚಿತ್ರದ ಮೂಲಕ ನಿರ್ದೇಶನಕ್ಕೆ ಕೈ ಹಾಕಿರುವ ನಿರ್ದೇಶಕ ಮಹೇಶ್ ಕುಮಾರ್ ಚುರುಕಿನಿಂದ ಚಿತ್ರದ ಶೂಟಿಂಗ್ ...
ರಚಿತಾ ರಾಮ್ ಹಾಗೂ ಬೈಕ್ ಜೊತೆ ನಟ ಸತೀಶ್ ನೀನಾಸಂ
ರಚಿತಾ ರಾಮ್ ಹಾಗೂ ಬೈಕ್ ಜೊತೆ ನಟ ಸತೀಶ್ ನೀನಾಸಂ
ಅಯೋಗ್ಯ ಚಿತ್ರದ ಮೂಲಕ ನಿರ್ದೇಶನಕ್ಕೆ ಕೈ ಹಾಕಿರುವ ನಿರ್ದೇಶಕ ಮಹೇಶ್ ಕುಮಾರ್ ಚುರುಕಿನಿಂದ ಚಿತ್ರದ ಶೂಟಿಂಗ್ ನಡೆಸುತ್ತಿದ್ದು ಶೇಕಡಾ 40ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಾಯಕ, ನಾಯಕಿಯಾಗಿರುವ ಚಿತ್ರದ ಬಹುತೇಕ ಭಾಗ ಮಂಡ್ಯದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು ಅದರಲ್ಲಿ ಮೇಕೆ ಕೂಡ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ.
ಮೇಕೆಗೆ ಬೈರ ಎಂದು ಹೆಸರಿಡಲಾಗಿದ್ದು ಚಿತ್ರದ ಸೆಟ್ ನಲ್ಲಿ ಪ್ರತಿಯೊಬ್ಬರ ಗಮನ ಕೂಡ ಸೆಳೆಯುತ್ತಿದೆ. ಚಿತ್ರದ ನಾಯಕಿ ರಚಿತಾ ರಾಮ್ ಅವರಿಗೆ ಕೂಡ ಇಷ್ಟವಾಗಿದೆ. ಮಂಡ್ಯದ ಒಂದು ಮನೆಯಿಂದ ಮೇಕೆಯನ್ನು ತೆಗೆದುಕೊಂಡು ಬರಲಾಗಿದ್ದು ಇದೀಗ ಚಿತ್ರದ ಶೂಟಿಂಗ್ ನಲ್ಲಿ ಆಕ್ಷನ್ ಕಟ್ ಹೇಳಿದರೆ ಅರ್ಥ ಮಾಡಿಕೊಂಡು ಅದಕ್ಕೆ ಪ್ರತಿಕ್ರಿಯಿಸುವುದನ್ನು ಕಲಿತಿದೆ. ಚಿತ್ರದ ನಾಯಕ ಬೈರನಿಗೆ ಹೆಚ್ಚು ಆಪ್ತನಾಗುತ್ತಾನೆ.
ನಾಯಕಿ ಜೊತೆ ರೊಮ್ಯಾನ್ಸ್ ಮಾಡಲು ನಾಯಕನಿಗೆ ಬೈರ ಪ್ರಮುಖ ಕಾರಣವಾಗುತ್ತದೆ. ಮಂಡ್ಯ ಭಾಗದ ಜೀವಂತಿಕೆ ಮತ್ತು ಚುರುಕುತನವನ್ನು ಚಿತ್ರದಲ್ಲಿ ಸೆರೆಹಿಡಿಯಲು ನಾನು ಬಯಸುತ್ತಿದ್ದು ಅದಕ್ಕೆ ಮೇಕೆ ಸರಿಯಾದ ಸಾಥ್ ನೀಡುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.
ನಿರ್ದೇಶಕರಲ್ಲಿ ಒಂದು ಹಳೆಯ ಜಾವಾ ಬೈಕ್ ಇರುತ್ತದೆ. ಹೆಣ್ಣುಮಕ್ಕಳ ಬೈಕ್ ಕೂಡ ಚಿತ್ರದ ಕಥೆಯಲ್ಲಿ ಪ್ರಮುಖ ಪಾತ್ರವಾಗಿದೆ. ಅದು ಕೇವಲ ಚಿತ್ರದಲ್ಲಿ ಪರಿಕರ ಮಾತ್ರವಲ್ಲ. ಇವೆಲ್ಲವೂ ಚಿತ್ರದಲ್ಲಿ ಪಾತ್ರಗಳಾಗಿವೆ. ಚಿತ್ರದ ಮುಂದಿನ ಹಂತದ ಚಿತ್ರೀಕರಣ ಜನವರಿ 15ರಂದು ಆರಂಭವಾಗಲಿದ್ದು ನಂತರ ಒಂದು ತಿಂಗಳಲ್ಲಿ ಚಿತ್ರೀಕರಣ ಪೂರ್ಣವಾಗಲಿದೆ. ಮೇ 15ರಂದು ಚಿತ್ರ ಬಿಡುಗಡೆ ಮಾಡಲು ನಿರ್ದೇಶಕರು ಯೋಚಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com