ಇದಕ್ಕೆ ನಟಿ ಶ್ರೀದೇವಿ ಪ್ರತಿಕ್ರಿಯೆ ನೀಡಿ, ರಾಜಮೌಳಿಯಂಥಹ ಘನತೆವೆತ್ತ ನಿರ್ದೇಶಕರು ನನ್ನ ಬಗ್ಗೆ ಹೀಗೆ ಏಕೆ ಮಾತನಾಡಿದರು ಎಂದು ನನಗೆ ನಂಬಲಾಗುತ್ತಿಲ್ಲ. ನಾನು ಯಾವುದೇ ರೀತಿಯ ಬೇಡಿಕೆಯೊಡ್ಡುವ ನಟಿಯಲ್ಲ. ಬಾಹುಬಲಿಯಲ್ಲಿ ನಡೆದಿದ್ದೆಲ್ಲ ಕಳೆದುಹೋದದ್ದು. ಈಗ ಅದರ ಬಗ್ಗೆ ಏಕೆ ಮಾತನಾಡುವುದು, ಈ ಹಿಂದೆ ಸಾಕಷ್ಟು ಪಾತ್ರಗಳನ್ನು ನಾನು ತಿರಸ್ಕರಿಸಿದ್ದೆ. ಅವುಗಳಲ್ಲಿ ಇದು ಕೂಡ ಒಂದು. ನೀವು ಮಾಡದಿರುವ ಚಿತ್ರದ ಬಗ್ಗೆ ಮಾತನಾಡುವುದು ಅವಿಧೇಯತೆ ಎಂದು ಹೇಳಿದ್ದರು.