ಬಹುತಾರಾಗಣದ ಈ ಕುರುಕ್ಷೇತ್ರದಲ್ಲಿ ಅಂಬರೀಶ್, ರವಿಚಂದ್ರನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ಗಳ ಅಭಿನಯವಿದೆ, ನಿರ್ಮಾಪಕ ಮುನಿರತ್ನ ಅವರಿಗಾಗಿ ನಾನು ಈ ಪಾತ್ರ ಒಪ್ಪಿಕೊಂಡಿದ್ದೇನೆ. ಅವರ ಕೆಲಸದ ಶೈಲಿ ನನಗೆ ಇಷ್ಟ. ಜೊತೆಗೆ ಅವರು ಸಿನಿಮಾ ತಂಡವನ್ನು ನಿರ್ವಹಿಸುವ ಕ್ರಮ ನನಗೆ ಮೆಚ್ಚುಗೆಯಾಗಿದೆ ಎಂದು ನಿಖಿಲ್ ಹೇಳಿದ್ದಾರೆ.