ದರ್ಶನ್ 'ಕುರುಕ್ಷೇತ್ರ'ದಲ್ಲಿ ಕರ್ಣನಾಗಿ ಶಿವಣ್ಣ, ಅರ್ಜುನನ ಪಾತ್ರದಲ್ಲಿ ಅರ್ಜುನ್ ಸರ್ಜಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಸಿನಿಮಾವಾಗಿರುವ ಕುರುಕ್ಷೇತ್ರಕ್ಕೆ ಕಲಾವಿದರ ಆಯ್ಕೆ ಅಂತಿಮವಾಗಿದ್ದು, ಆಗಸ್ಟ್ 6 ರಿಂದ ಶೂಟಿಂಗ್...
ಶಿವರಾಜ್ ಕುಮಾರ್, ದರ್ಶನ್ ಮತ್ತು ಅರ್ಜುನ್ ಸರ್ಜಾ
ಶಿವರಾಜ್ ಕುಮಾರ್, ದರ್ಶನ್ ಮತ್ತು ಅರ್ಜುನ್ ಸರ್ಜಾ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಸಿನಿಮಾವಾಗಿರುವ ಕುರುಕ್ಷೇತ್ರಕ್ಕೆ ಕಲಾವಿದರ ಆಯ್ಕೆ ಅಂತಿಮವಾಗಿದ್ದು, ಆಗಸ್ಟ್ 6 ರಿಂದ ಶೂಟಿಂಗ್ ಆರಂಭವಾಗಲಿದೆ.
ಮೆಗಾ ಪ್ರಾಜೆಕ್ಟ್ ಆಗಿರುವ ಕುರುಕ್ಷೇತ್ರವನ್ನು ತ್ರಿಡಿ ಎಫೆಕ್ಟ್ ನಲ್ಲಿ ನಿರ್ದೇಶಕ ನಾಗಣ್ಣ ತಯಾರಿಸುತ್ತಿದ್ದಾರೆ. ಅಂಬರೀಷ್, ರವಿಚಂದ್ರನ್, ಸ್ನೇಹ, ಹರಿಪ್ರಿಯಾಸ ರೆಜಿನಾ ಕಾಸ್ಸಂದ್ರ, ಶಶಿಕುಮಾರ್, ಲಕ್ಷ್ಮಿ, ಸಾಯಿ ಕುಮಾರ್, ದ್ಯಾನಿಶ್ ಅಖ್ತರ್ ಸೈಫಿ ಸೇರಿದಂತೆ ಹಲವು ಪಾತ್ರದಾರಿಗಳ ಆಯ್ಕೆ ಈಗಾಗಲೇ ಅಂತಿಮವಾಗಿದೆ. 
ಪ್ರಮುಖ ಪಾತ್ರಗಳಾದ ಕರ್ಣ ಮತ್ತು ಅರ್ಜುನನ ಪಾತ್ರಗಳನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಬಗ್ಗೆ ಸಿನಿಮಾ ತಂಡ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುರುಕ್ಷೇತ್ರದಲ್ಲಿ ಪಾಂಡವರ ತಂಡದಲ್ಲಿ ನಟಿಸಲು ಅರ್ಜುನ್ ಸರ್ಜಾ ಒಪ್ಪಿದ್ದಾರೆ. ಆದರೆ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. 
ಕರ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು ಅಧಿಕೃತವಾಗಿ ಪ್ರಕಟಿಸಬೇಕಷ್ಟೆ. ದರ್ಶನ್ ಜೊತೆ ಶಿವರಾಜ್ ಕುಮಾರ್ ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಅಭಿಮಾನಿಗಳ ಪಾಲಿಗೆ ರಸದೌತಣವಾಗಿದೆ. ಖುಷಿಗೆ ಇದು ಒಂದು ಕಾರಣ ಅಷ್ಟೇ, ಆದರೇ ಅದಕ್ಕಿಂತ ಮುಖ್ಯವಾದದ್ದು ಶಿವರಾಜ್ ಕುಮಾರ್ ಕರ್ಣನ ಪಾತ್ರದಲ್ಲಿ ನಟಿಸುತ್ತಿರುವುದು. ಮುನಿರತ್ನ ನಿರ್ಮಾಣದ ಕುರುಕ್ಷೇತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com