ಮಕ್ಕಳಿಗೆ ಬೋಧನೆ ಮಾಡುವ, ಕಷ್ಟಗಳನ್ನೇ ಬಿಂಬಿಸುವ ಚಿತ್ರದ ಬದಲಿಗೆ ಅಪ್ಪಟ ಮನರಂಜನೆಯ ಮೂಲಕ ಪರೋಕ್ಷ ಸಂದೇಶ ನೀಡುವ ಚಿತ್ರ ಇದಾಗಿದೆ. ದಿಡ್ಡಳ್ಳಿ ಮಾದರಿಯ ಗಿರಿಜನ ಹೋರಾಟದಲ್ಲಿ ಭಾಗಿಯಾಗುವ ಮಕ್ಕಳು ನೆರವು ಕೋರಿ ಮುಖ್ಯಮಂತ್ರಿಗೆ ಮನವಿ ಮಾಡುತ್ತಾರೆ. ಮಕ್ಕಳಿಗೆ ಸಹಾಯ ನೀಡುವ ಪಾತ್ರವನ್ನು ಸಿದ್ದರಾಮಯ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.