ಚಂದ್ರು 'ಕನಕ'ನಿಗೆ ಆಟೋ ಚಾಲಕ ಸ್ಫೂರ್ತಿ

ದುನಿಯಾ ವಿಜಯ್ ನಾಯಕನಟನಾಗಿರುವ ಆರ್ ಚಂದ್ರು ನಿರ್ದೇಶನದ 'ಕನಕ' ಸದ್ಯಕ್ಕೆ ಚಿತ್ರೀಕರಣಗೊಳ್ಳುತ್ತಿದೆ. ನಾಯಕನಟನ ಮೊದಲ ನೋಟದಿಂದ ಅವರು ಡಾ. ರಾಜಕುಮಾರ್
'ಕನಕ' ಸಿನೆಮಾದಲ್ಲಿ ದುನಿಯಾ ವಿಜಯ್
'ಕನಕ' ಸಿನೆಮಾದಲ್ಲಿ ದುನಿಯಾ ವಿಜಯ್
Updated on
ಬೆಂಗಳೂರು: ದುನಿಯಾ ವಿಜಯ್ ನಾಯಕನಟನಾಗಿರುವ ಆರ್ ಚಂದ್ರು ನಿರ್ದೇಶನದ 'ಕನಕ' ಸದ್ಯಕ್ಕೆ ಚಿತ್ರೀಕರಣಗೊಳ್ಳುತ್ತಿದೆ. ನಾಯಕನಟನ ಮೊದಲ ನೋಟದಿಂದ ಅವರು ಡಾ. ರಾಜಕುಮಾರ್ ಅಭಿಮಾನಿಯಾದ ಆಟೋ ಚಾಲಕನ ಪಾತ್ರ ನಿರ್ವಹಿಸುತ್ತಿರುವುದು ತಿಳಿದುಬರುತ್ತದೆ ಮತ್ತು ಚಂದ್ರು ಅವರೇ ಹೇಳುವಂತೆ ಈ ರೋಮ್ಯಾಂಟಿಕ್ ಸಿನೆಮಾಗೆ ನಿಜ ಜೀವನ ಸ್ಫೂರ್ತಿ ಎನ್ನುತ್ತಾರೆ. 
"ನಾನು ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರನ್ನು ಭೇಟಿ ಮಾಡಿದೆ. ಅವರು ಅನಕ್ಷರಸ್ಥ ಮತ್ತು ಡಾ. ರಾಜಕುಮಾರ್ ಸಿನೆಮಾಗಳನ್ನು ನೋಡಿಕೊಂಡು ಬೆಳೆದವರು. ಅವರಿಗೆ ರಾಜಕುಮಾರ್ ಅವರ ಸಿನಿಮಾಗಳೇ ಕಲಿಯುವ ವ್ಯವಸ್ಥೆ-ಸಂಸ್ಥೆಯಂತೆ. 
ಅಣ್ಣಾವ್ರು ತೀರಿಕೊಂಡ ನಂತರ ಊಟ ಮಾಡುವುದನ್ನೇ ಬಿಟ್ಟಿದ್ದಾಗಿ ಕೂಡ ಅವರು ನನಗೆ ಹೇಳಿದ್ದರು. 
ಡಾ. ರಾಜಕುಮಾರ್ ಅವರ ಆದರ್ಶಗಳನ್ನು ಪಾಲಿಸಿ ಸಮಾಜ ಸೇವೆ ಮಾಡುವುದೊಂದೇ ಅವರ ಗುರಿಯಾಗಿತ್ತು" ಎಂದು ವಿವರಿಸುತ್ತಾರೆ ಚಂದ್ರು. 
ಆಟೋಚಾಲಕನ ಜೀವನದಲ್ಲಿ ಒಂದು ಸುಂದರ ಪ್ರೇಮಕಥೆ ಕೂಡ ಇತ್ತು ಮತ್ತೀಗ ಅದನ್ನು ಸಿನಿಮಾಗಾಗಿ ತಕ್ಕಂತೆ ಅಳವಡಿಸಿಕೊಂಡಿರುವುದಾಗಿ ಹೇಳುತ್ತಾರೆ ಚಂದ್ರು. 
"ಪ್ರೇಕ್ಷಕರಿಗೆ ಸಂಬಂಧಿಸುವ ನೈಜ ಕಥೆಗಳನ್ನು ನಾನು ಹುಡುಕುತ್ತಿರುತ್ತೇನೆ. ನಾನು ಕಮರ್ಷಿಯಲ್ ಸಿನೆಮಾಗಳ ಮೂಲಕ ಹಣ ಮಾಡಿದ್ದೇನೆ. 
ಆದರೆ ನಾನು ಭೇಟಿ ಮಾಡುವ ಬಹಳಷ್ಟು ಜನರು, ನಾನು ನಿಜ ಕಥೆಗಳನ್ನು ಆಧರಿಸಿ ಮಾಡಿರುವ 'ತಾಜ್ ಮಹಲ್', 'ಚಾರ್ ಮಿನಾರ್' ಮತ್ತು 'ಮೈಲಾರಿ' ಸಿನೆಮಾಗಳನ್ನು ಹೆಚ್ಚು ಮೆಚ್ಚಿದ್ದಾಗಿ ಹೇಳುತ್ತಿರುತ್ತಾರೆ. ಮತ್ತೀಗ ಈ ಸಿನೆಮಾ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ" ಎನ್ನುತ್ತಾರೆ ಚಂದ್ರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com