ವದಂತಿಗಳು ಹರಡಿರುವ ಹಿನ್ನಲೆಯಲ್ಲಿ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ರೇಖಾ ಕೃಷ್ಣಪ್ಪ, ನಾನು ಜೀವಂತವಾಗಿಯೇ ಇದ್ದೇನೆ. ನಾನು ಚೆನ್ನಾಗಿದ್ದೇನೆ. ಪ್ರಸ್ತುತ ಶೃಂಗೇರಿಯ ಶಾರದಾ ಪೀಠ ದೇವಸ್ಥಾನದಲ್ಲಿದ್ದೇನೆ. ರೇಖಾ ಸಿಂಧು ಎಂಬ ಹೆಸರಿನ ಕಿರುತೆರೆ ನಟಿ ಸಾವನ್ನಪ್ಪಿದ ಬಳಿಕ ನನಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ.