'ನೀವೆಲ್ಲಾ ಮಾಧ್ಯಮದವರು ಸೇರಿ ನನ್ನನ್ನು ಸಂವಾದದಲ್ಲಿ ಪಾಲ್ಗೋಳ್ಳುವಂತೆ ಆಹ್ವಾನಿಸಿದ್ದೀರಿ, ಅದಕ್ಕೆ ನಾನು ಒಪ್ಪಿ ಬಂದೆ, ಪ್ರತಿಯೊಬ್ಬರ ಪ್ರಶ್ನೆಗೂ ನಾನು ಉತ್ತರಿಸಿದ್ದೇನೆ, ಆದರೆ ನಂತರ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಲಾಗಿದೆ. ನಮ್ಮ ನಿಮ್ನ ನಡುವೆ ನಂಬಿಕೆ ಎಲ್ಲಿಂದ ಬರಬೇಕು, ಪ್ರೆಸ್ ಕ್ಲಬ್ ನಲ್ಲಿ ಎಲ್ಲಾ ಮಾಧ್ಯಮದವರು ಇದ್ದು ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಇಂತಹವರ ವಿರುದ್ಧ ಪ್ರೆಸ್ ಕ್ಲಬ್ ಯಾವ ಕ್ರಮಕೈಗೊಳ್ಳುತ್ತದೆ. ಎಂದು ಪ್ರಶ್ನಿಸಿರುವ ಪ್ರಕಾಶ್ ರೈ, ನನ್ನ ಪ್ರಶ್ನೆಗೆ ಉತ್ತರ ಸಿಗಲಿದೆ ಎಂಬ ಭರವಸೆಯಲ್ಲಿದ್ದೇನೆ ಎಂದು ಬರೆದಿದ್ದಾರೆ. '