ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುದುಚೇರಿ ಲೆ.ಗವರ್ನರ್ ಕಿರಣ್ ಬೇಡಿ ಅವರು, "ನಾವು ಇಂಥಹ ಮೋಸಗಳಿಗೆ ಕೊನೆ ಹಾಡಬೇಕಿದ್ದು, ಪುದುಚೆರಿಗೆ ತೆರಿಗೆ ನಷ್ಟವಾದರೂ, ತಮಿಳುನಾಡಿಗೆ ತೆರಿಗೆ ನಷ್ಟವಾದರೂ, ಅದು ದೇಶದ ಕಂದಾಯಕ್ಕಾಗುವ ನಷ್ಟವೇ. ಜತೆಗೆ, ಇಂಥಹ ತಂತ್ರಗಳು ನಮ್ಮ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತವೆ. ಈ ಪ್ರಕರಣದ ಕುರಿತು ತಕ್ಷ ಣವೇ ಗಮನ ಹರಿಸಿ, ಇಂಥಹ ಘಟನೆಗಳಿಗೆ ಬ್ರೇಕ್ ಹಾಕಿ'' ಎಂದು ಬೇಡಿ ಸಾರಿಗೆ ಆಯುಕ್ತರಿಗೆ ನೀಡಿದ ಅಧಿಕೃತ ನಿರ್ದೇಶನದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.